ಕಾನೂನು ಕೈಗೆತ್ತಿಕೊಳ್ಳುವ ಸಂಘಟನೆಗಳ ವಿರುದ್ಧ ಸಮಾನವಾಗಿ ಕ್ರಮ ಜರುಗಿಸಿ: ಯು.ಟಿ. ಖಾದರ್
ಮಂಗಳೂರು, ಸೆ.27: ಕಾನೂನನ್ನು ಯಾವುದೇ ಸಂಘಟನೆಗಳು ಕೈಗೆತ್ತಿಕೊಂಡರೂ ಕೂಡ ಸರಕಾರ ಅವುಗಳ ವಿರುದ್ಧ ಸಮಾನವಾಗಿ ಕಾನೂನು ಕ್ರಮ ಜರುಗಿಸಬೇಕು ಎಂದು ರಾಜ್ಯ ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್ ತಿಳಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಮಾಜದಲ್ಲಿ ಅಶಾಂತಿ, ಆತಂಕ, ಭಯದ ವಾತಾವರಣವನ್ನು ಯಾವುದೇ ಸಂಘಟನೆ ಸೃಷ್ಟಿಸಿದರೂ ಸರಕಾರ ತಾರತಮ್ಯವಿಲ್ಲದೆ ಕ್ರಮ ಜರುಗಿಸಬೇಕು. ಸರಕಾರದ ಕ್ರಮದಿಂದ ಯಾರಿಗೂ ಅನ್ಯಾಯವಾಗಬಾರದು. ನಿರಪರಾಧಿಗೆ ಶಿಕ್ಷೆಯಾಗಬಾರದು. ನೈಜ ಆರೋಪಿಗಳಿಗೆ ಶಿಕ್ಷೆಯಾಗಬೇಕು. ನ್ಯಾಯಯುತ ತನಿಖೆಗೆ ಎಲ್ಲರೂ ಸಹಕಾರ ನೀಡಲಿದ್ದಾರೆ ಎಂದರು.
Next Story