ದ.ಕ.ಜಿಲ್ಲಾ ಎಸ್ವೈಎಸ್ ನಿಂದ ರಬೀಹ್ ಮೀಲಾದ್ ಕ್ಯಾಂಪೇನ್
ಮಂಗಳೂರು, ಸೆ.27: ಪ್ರವಾದಿ (ಸ)ರವರ ಜನ್ಮ ಮಾಸಾಚರಣೆಯ ಪ್ರಯುಕ್ತ ದ.ಕ.ಜಿಲ್ಲಾ ಎಸ್ವೈಎಸ್ ವತಿಯಿಂದ ಆಯೋಜಿಸಲಾದ ‘ರಬೀಹ್ ಮೀಲಾದ್ ಕ್ಯಾಂಪೇನ್’ ಕಾರ್ಯಕ್ರಮಕ್ಕೆ ನಗರದ ಜಂಇಯ್ಯತುಲ್ ಫಲಾಹ್ ಆಡಿಟೋರಿಯಂನಲ್ಲಿ ಮಂಗಳವಾರ ಚಾಲನೆ ನೀಡಲಾಯಿತು.
‘ನ್ಯಾಯ ಕೈ ತಪ್ಪುತ್ತಿರುವ ಲೋಕ, ನ್ಯಾಯವನ್ನು ಸ್ಥಾಪಿಸಿದ ಪ್ರವಾದಿ’ ಎಂಬ ಘೋಷಣೆಯೊಂದಿಗೆ ನಡೆಯುವ ಅಭಿಯಾನಕ್ಕೆ ದ.ಕ.ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಚಾಲನೆ ನೀಡಿದರು.
ಕೇಂದ್ರ ಮುಶಾವರ ಸದಸ್ಯ ಬಂಬ್ರಾಣ ಅಬ್ದುಲ್ ಖಾದರ್ ಅಲ್ ಖಾಸಿಮಿ, ಎಸ್ಬಿ ಮುಹಮ್ಮದ್ ದಾರಿಮಿ, ಉಸ್ಮಾನುಲ್ ಫೈಝಿ ಉಳ್ಳಾಲ ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಎಸ್ವೈಎಸ್ ದ.ಕ.ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಝ್ ದಾರಿಮಿ ಮಾತನಾಡಿ ವಲಯ ಮತ್ತು ಶಾಖೆಗಳಲ್ಲಿ ವಿಚಾರ ಸಂಕಿರಣ, ಗುಲ್ಷನ್ ಹೆಸರಲ್ಲಿ ಮನೆಗಳನ್ನು ಅಲಂಕರಿಸುವುದು, ಮೀಲಾದ್ ಮೆಹಫಿಲ್ ಪ್ರಯುಕ್ತ ಸಭೆಗಳನ್ನು ಸಂಘಟಿಸಿ ನ್ಯಾಯ ಪಾಲನೆಯ ವಿಚಾರದಲ್ಲಿ ಜನಜಾಗ್ರೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ತಬೂಕ್ ದಾರಿಮಿ, ಕೆ. ಬಿ. ದಾರಿಮಿ, ಕುಕ್ಕಿಲ ದಾರಿಮಿ, ಸಿದ್ದೀಕ್ ದಾರಿಮಿ ಕಡಬ, ಶರೀಫ್ ಕುದ್ದುಪದವು, ಶರೀಫ್ ಮಿತ್ತಬೈಲು, ಅಬೂಬಕರ್ ಮುಲಾರ್ ಹಕೀಮ್ ಪರ್ತಿಪ್ಪಾಡಿ, ಹಮೀದ್ ಹಾಜಿ ಸುಳ್ಯ, ಕತರ್ ಹಾಜಿ ಪಾಲ್ಗೊಂಡಿದ್ದರು.
ಕಾರ್ಯದರ್ಶಿ ಕೆ.ಎಲ್. ಉಮರ್ ದಾರಿಮಿ ಸ್ವಾಗತಿಸಿದರು.