ತಣ್ಣೀರುಬಾವಿ ಸಮುದ್ರ ಕಿನಾರೆಯಲ್ಲಿ ಸ್ವಚ್ಛ ಸಾಗರ ಕಾರ್ಯಕ್ರಮ
ಕೊಣಾಜೆ: ಯುವ ರೆಡ್ ಕ್ರಾಸ್ ಘಟಕ ಯೆನೆಪೋಯ ವಿಶ್ವವಿದ್ಯಾನಿಲಯ ದೇರಳಕಟ್ಟೆ ಹಾಗೂ ಲಯನ್ಸ್ ಕ್ಲಬ್ ಕಾವೂರ್ ಇವರ ವತಿಯಿಂದ 'ಸ್ವಚ್ಛ ಸಾಗರ' ಕಾರ್ಯಕ್ರಮ ತಣ್ಣೀರುಬಾವಿ ಸಮುದ್ರ ಕಿನಾರೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಕ್ಲಬ್ ನ ಕಾರ್ಯದರ್ಶಿ ಅಶ್ವಿನ್ ಕುಮಾರ್ ಮಾತನಾಡಿ ಕಾರ್ಯಕ್ರಮದ ಬಗ್ಗೆ ವಿವರಿಸಿದರು. ಯುವ ರೆಡ್ ಕ್ರಾಸ್ ಸ್ವಯಂ ಸೇವಕರು ಮತ್ತು ಲಯನ್ಸ್ ಕ್ಲಬ್ ಕಾವೂರ್ ಸದಸ್ಯರು ಸಮುದ್ರ ಕಿನಾರೆ ಪರಿಸರವನ್ನು ಸ್ವಚ್ಛಗೊಳಿಸಿ ತಾಜ್ಯ ವಿಲೇವಾರಿ ಲಕೋಟೆಗಳಲ್ಲಿ ತುಂಬಿದರು.
ಯುವ ರೆಡ್ ಕ್ರಾಸ್ ಸ್ವಯಂಸೇವಕರು 5 ಗುಂಪುಗಳಲ್ಲಿ ಸ್ವಚ್ಛ ಸಾಗರ ಬಿಂಬಿಸುವ ಮರಳಿನ ಕಲಾಕೃತಿ ತಯಾರಿಸಿದರು. ಹತ್ತಿರದ ಎಲ್ಲ ಅಂಗಡಿಗಳಿಗೂ ಸ್ವಚ್ಛತೆಯ ಘೋಷಣೆ ಸಾರುವ ಭಿತ್ತಿಚಿತ್ರಗಳನ್ನು ಅಂಟಿಸಲಾಯಿತು. ಸ್ವಯಂ ಸೇವಕರು ಸ್ವಚ್ಛ ಸಾಗರ ಸಂದೇಶ ಸಾರುವ ಗುಂಪು ನೃತ್ಯ ಪ್ರದರ್ಶಿಸಿದರು.
ಲಯನ್ಸ್ ಕ್ಲಬ್ ನ ನಿತ್ಯಾನಂದ ಶೆಟ್ಟಿ, ಯುವ ರೆಡ್ ಕ್ರಾಸ್ ಯೆನೆಪೋಯ ಇದರ ನೋಡಲ್ ಅಧಿಕಾರಿ, ನಿತ್ಯಶ್ರೀ ಬಿ ವಿ, ಡಾ. ಸಯ್ಯದ್, ಡಾ. ಅರುಣ್ ದೀಪ್, ಡಾ. ತಾರಿಕ್, ಡಾ. ಹರಿನಾರಾಯಣ, ವಿಕ್ಟರ್ ಮೊರಾಸ್ , ಹೇಮಲತಾ ರಘು, ಸಾಲಿಯಾನ್ ಸ್ವರೂಪ ಶೆಟ್ಟಿ ಇವರು ಉಪಸ್ಥಿತರಿದ್ದರು