ಮಂಗಳೂರು: ಡಿ.2ರಂದು "ಸೀರತ್ ಕಾರ್ಯಕ್ರಮ"ದ ಸಮಾರೋಪ
ಮಂಗಳೂರು: ಮಂಗಳೂರಿನ ಹೆಚ್.ಐ.ಎಫ್ ಇಂಡಿಯಾ ವತಿಯಿಂದ ಪ್ರವಾದಿ ಮುಹಮ್ಮದ್ (ಸ) ಅವರ ಜೀವನ ಮತ್ತು ಸಂದೇಶ ಅಭಿಯಾನ (ಸೀರತ್ ಕಾರ್ಯಕ್ರಮ) ನ.4ರಂದು ಆರಂಭಗೊಂಡಿದ್ದು, ಡಿ.2ರಂದು ಸಂಜೆ 6:45ಕ್ಕೆ ನಗರದ ಟೌನ್ ಹಾಲ್ನಲ್ಲಿ ಸಮಾಪನಗೊಳ್ಳಲಿದೆ.
ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಥರ್ ಖಾನ್, (ಅಧ್ಯಕ್ಷರು, ಅಲ್ ಅಸರ್ ಫೌಂಡೇಶನ್, ಬೋಫಾಲ್, ಹೈಲ್ಯಾಂಡ್ ಇಸ್ಲಾಮಿಕ್ ಫೋರಂನ ಅಧ್ಯಕ್ಷ ನಾಝಿಮ್ ಎ.ಕೆ., ಕಾರ್ಯಕ್ರಮದ ಸಂಚಾಲಕ ಹನೀಫ್ ಪಿ.ಎಸ್. ಭಾಗವಹಿಸಲಿರುವರು. ಸರ್ವ ಧರ್ಮೀಯ ಬಾಂಧವರೆಲ್ಲರಿಗೂ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶವಿದೆ ಎಂದು ಕಾರ್ಯಕ್ರಮದ ಸಂಚಾಲಕ ಹನೀಫ್ ಪಿ.ಎಸ್. ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story