ಮಂಗಳೂರು | ಕರ್ನಾಟಕ ಮುಸ್ಲಿಂ ಜಮಾಅತ್ ನೂತನ ಸಾರಥಿಗಳ ಆಯ್ಕೆ
ಮಂಗಳೂರು: ಕರ್ನಾಟಕ ಮುಸ್ಲಿಂ ಜಮಾಅತ್ ಇದರ ರಾಜ್ಯ ಮಹಾಸಭೆ ಮಂಗಳೂರು ಪಂಪ್ವೆಲ್ ಡಿಕೆ ಹಾಲ್ ನಲ್ಲಿ ಸುನ್ನಿ ಜಂಯ್ಯತುಲ್ ಉಲಮಾ ಕರ್ನಾಟಕ ಅಧ್ಯಕ್ಷ ರಾದ ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ನೇತೃತ್ವ ದಲ್ಲಿ ನಡೆಯಿತು.
ರಾಜ್ಯ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಕೆ ಸಿ ರೋಡ್ ಹುಸೈನ್ ಸಅದಿ ಸಭೆಯನ್ನು ಉದ್ಘಾಟಿಸಿದರು. ಸಭೆಯಲ್ಲಿ ಎಂಬಿ ಸಾದಿಕ್ ಮಾಸ್ಟರ್ ಮಲೆಬೆಟ್ಟು ವರದಿ ವಾಚಿಸಿದರು. ಅಶ್ರಫ್ ಕಿನಾರ ಮಂಗಳೂರು ಲೆಕ್ಕ ಪತ್ರ ಮಂಡನೆ ಮಾಡಿದರು.
ಸಂಪನ್ಮೂಲ ವ್ಯಕ್ತಿ ಯಾಗಿ ಭಾಗವಹಿಸಿದ ಮೌಲಾನಾ ಪೆರೋಡ್ ಅಬ್ದುರ್ರಹ್ಮಾನ್ ಸಖಾಫಿ ಉಸ್ತಾದರು ಸಂಘಟನಾ ಹಿತೋಪದೇಶಗಳು ನೀಡಿ ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆಗೆ ನೇತೃತ್ವ ನೀಡಿದರು.
ಗೌರವಾಧ್ಯಕ್ಷರಾಗಿ ಮುಫ್ತಿ ಎ ಕರ್ನಾಟಕ ಮುಫ್ತಿ ಅನ್ವರಲಿ ಸಾಹಿಬ್ ರಾಮನಗರ ಬೆಂಗಳೂರು, ಅಧ್ಯಕ್ಷರಾಗಿ ಮೌಲಾನಾ ಮುಹಮ್ಮದ್ ಪಾಝಿಲ್ ರಝ್ವಿ ಕಾವಲ್ ಕಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ಎಚ್ ಐ ಅಬೂಸುಫ್ ಯಾನ್ ಮದನಿ, ಕೋಶಾಧಿಕಾರಿಯಾಗಿ ಹಾಜಿ ಇಕ್ಬಾಲ್ ಹಬೀಬ್ ಸೇಟ್ ಶಿವಮೊಗ್ಗ, ಉಪಾಧ್ಯಕ್ಷರಾಗಿ ಪಿಪಿ ಅಹ್ಮದ್ ಸಖಾಫಿ ಕಾಶಿಪಟ್ನ,ಸಯ್ಯಿದ್ ಇಸ್ಮಾಯಿಲ್ ತಂಞಲ್ ಮದನಿ ಉಜಿರೆ,ಎನ್ ಕೆ ಎಂ ಶಾಫಿ ಸ ಅದಿ ಬೆಂಗಳೂರು,ರಾಜೇಶ್ ಮುಹಮ್ಮದ್ ಹಾಜಿ ಸಾಗರ,ಸಯ್ಯಿದ್ ಸೈಪುಲ್ಲಾ ಸಾಬ್ ದಾವಣಗೆರ,
ಕಾರ್ಯದರ್ಶಿ ಗಳಾಗಿ ಅಬ್ದುಲ್ ಹಮೀದ್ ಬಜಪೆ,ಎಂಬಿಎಂ ಸಾದಿಕ್ ಮಾಸ್ಟರ್ ಮಲೆಬೆಟ್ಟು,ಎಚ್ ಸುಬ್ ಹಾನ್ ಅಹ್ಮದ್ ಹೊನ್ನಾಳ ಉಡುಪಿ,ಯೂಸುಫ್ ಹಾಜಿ ಉಪ್ಪಳ್ಳಿ ಚಿಕ್ಕಮಗಳೂರು, ಅಬ್ದುಲ್ ಲತೀಫ್ ಸೂಂಠಿಕೊಪ್ಪ ಮಡಿಕೇರಿ ಸದಸ್ಯರು ಗಳಾಗಿ ಯುಕೆ ಮುಹಮ್ಮದ್ ಸ ಅದಿ ವಳವೂರು,ಕೆ ಸ್ ಸಾದುಲಿ ಪೈಝಿ ಕೊಟ್ಟಮುಡಿ,ಎಸ್ ಪಿ ಹಂಝ ಸಖಾಫಿ ಬಂಟ್ವಾಳ,ಪಿ ಎಂ ಉಸ್ಮಾನ್ ಸ ಅದಿ ಪಟ್ಟೋರಿ,ಜಿ ಎಂ ಕಾಮಿಲ್ ಸಖಾಫಿ,ತೋಕೆ ಮುಹ್ ಯುದ್ದೀನ್ ಕಾಮಿಲ್ ಸಖಾಫಿ, ಡಾ. ಎಂ ಎಸ್ ಎಂ ಝೈನೀ ಕಾಮಿಲ್ ಸಖಾಫಿ, ಎಂಪಿ ಎಂ ಅಶ್ರಫ್ ಸ ಅದಿ ಮಲ್ಲೂರು, ಬಿ ಎಂ ಮುಮ್ತಾಜ್ ಅಲಿ ಕೃಷ್ಣಾಪುರ, ಅಶ್ರಫ್ ಕಿನಾರ ಮಂಗಳೂರು,ನೇಜಾರು ಅಬೂಬಕ್ಕರ್ ಹಾಜಿ ಉಡುಪಿ, ಎ ಎಚ್ ಅಬೂಬಕ್ಕರ್ ಹಾಜಿ ಸಕಲೇಶಪುರ ಹಾಸನ,ಬಿ ಎಂ ಉಮರ್ ಹಾಜಿ ಅಭಿಮಾನ್ ಬೆಂಗಳೂರು, ನವಾಝ್ ಅಹ್ಮದ್ ಅಶ್ರಫಿ ಬಳ್ಳಾರಿ,ಅಡ್ವಕೇಟ್ ಕುಂಞ ಅಬ್ಬುಲ್ಲ ಮಡಿಕೇರಿ,ಅಬ್ದುಲ್ ರಹಿಮಾನ್ ನ್ಯಾಷನಲ್ ಶಿವಮೊಗ್ಗ,ಜಿ ಯಾಕುಬ್ ಯೂಸುಫ್ ಬೆಂಗಳೂರು,ಎಂಬಿ ಹಮೀದ್ ಮಡಿಕೇರಿ, ಅಬ್ದುಲ್ ಕರೀಮ್ ಮುಹ್ಸಿನ್ ರಿಫಾಯಿ ಹಾವೇರಿ ಇವರನ್ನು ಆಯ್ಕೆ ಮಾಡಲಾಯಿತು.
ಎನ್ ಕೆ ಎಂ ಶಾಫಿ ಸಅದಿ ಸ್ವಾಗತಿಸಿ ಎಸ್ಪಿ ಹಂಝ ಸಖಾಫಿ ಕಾರ್ಯಕ್ರಮ ನಿರೂಪಿಸಿದರು.