ಸೈಯದ್ ಅಬ್ದುರ್ರಹ್ಮಾನ್ ಬಾಫಕಿ ತಂಙಳ್ ಫೌಂಡೇಶನ್ನ ಮಹಾಸಭೆ
ಮಂಗಳೂರು, ಡಿ.9: ಸೈಯದ್ ಅಬ್ದುರ್ರಹ್ಮಾನ್ ಬಾಫಕಿ ತಂಙಳ್ ಫೌಂಡೇಶನ್ ಕರ್ನಾಟಕ ಇದರ ವಾರ್ಷಿಕ ಮಹಾಸಭೆಯು ನಗರದ ಸೆಂಟ್ರಲ್ ಮುಸ್ಲಿಂ ಕಮಿಟಿಯ ಕಟ್ಟಡದಲ್ಲಿರುವ ಫೌಂಡೇಶನ್ನ ಕಚೇರಿಯಲ್ಲಿ ಜರಗಿತು. ನ್ಯಾಯವಾದಿ ಎಸ್. ಸುಲೈಮಾನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಫೌಂಡೇಶನ್ನ ನೂತನ ಅಧ್ಯಕ್ಷರಾಗಿ ಡಾ. ಶೇಖ್ ಬಾವ ಮಂಗಳೂರು, ಪ್ರಧಾನ ಕಾರ್ಯದರ್ಶಿಯಾಗಿ ಎ.ಎಸ್ ಇಬ್ರಾಹೀಂ ಕರೀಂ ಕಡಬ, ಕೋಶಾಧಿಕಾರಿಯಾಗಿ ರಿಯಾಝ್ ಹರೇಕಳ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ನ್ಯಾಯವಾದಿ ಎಸ್.ಸುಲೈಮಾನ್ (ಕಾನೂನು ವ್ಯವಹಾರ), ಅಹ್ಮದ್ ಶಬೀರ್ ಅಝ್ಹರಿ (ವಿದ್ಯಾರ್ಥಿ ಮಾರ್ಗದರ್ಶನ), ರಶೀದ್ ಹಾಜಿ ಪಾಂಡೇಶ್ವರ (ಸೇವಾ ಚಟುವಟಿಕೆಗಳು), ಎಚ್. ಮುಹಮ್ಮದ್ ಇಸ್ಮಾಯಿಲ (ಕಾರ್ಯಕ್ರಮ ಸಂಯೋಜನೆ) ಮತ್ತು ಕಾರ್ಯದರ್ಶಿಗಳಾಗಿ ಉನೈಸ್ ಕೊಡಗು, ಅಬ್ದುರ್ರಹ್ಮಾನ್ ಪನ್ಯ ಆಯ್ಕೆಯಾದರು.
ಪೋಷಕರಾಗಿ ಹಾಜಿ ಅಬ್ದುರ್ರಶೀದ್ ಪರ್ಲಡ್ಕ, ಹಾಜಿ ಅಬ್ದುರ್ರಶೀದ್ ಉಳ್ಳಾಲ, ಕೆ.ಪಿ. ಮುಹಮ್ಮದ್ ಶರೀಫ್ ಫೈಝಿ ಪನ್ಯ ಅವರನ್ನು ಆಯ್ಕೆ ಮಾಡಲಾಯಿತು. ಎ.ಎಸ್.ಇ ಕರೀಂ ಸ್ವಾಗತಿಸಿದರು. ಎಚ್. ಮುಹಮ್ಮದ್ ಇಸ್ಮಾಯಿಲ್ ವಂದಿಸಿದರು.