ಮಂಗಳೂರು: ಜ.1ರಂದು ಸ್ವಚ್ಛ ಸುಂದರ ಬೀಚ್ - ಸ್ವಚ್ಛತಾ ಕಾರ್ಯಕ್ರಮ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ, ಮಂಗಳೂರು ಮಹಾನಗರ ಪಾಲಿಕೆ,ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ,ಕ್ರೆಡೈ ಮಂಗಳೂರು, ಮತ್ತು ರಾಷ್ಟ್ರೀಯ ಸೇವಾ ಯೋಜನೆ ಮಂಗಳೂರು ವಿಶ್ವ ವಿದ್ಯಾನಿಲ ಯದ ಸಹಯೋಗ ದಲ್ಲಿಪಣಂಬೂರು ಬೀಚ್ ನಲ್ಲಿ ಜನವರಿ 1,2023ರಂದು ಬೆಳಿಗ್ಗೆ 8ಗಂಟೆಗೆ 'ಸ್ವಚ್ಛ ಸುಂದರ ಬೀಚ್ '-ಸ್ವಚ್ಛತಾ ಕಾರ್ಯಕ್ರಮವನ್ನು ದ.ಕ.ಲೋಕಸಭಾ ಕ್ಷೇತ್ರ ಕಾರ್ಯಕ್ರಮವನ್ನು ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಡಾ.ಭರತ್ ಶೆಟ್ಟಿ ಶಾಸಕರು ಮಂಗಳೂರು ಉತ್ತರ ವಿಧಾನಸಭಾಕ್ಷೇತ್ರ, ಎಂ.ಆರ್.ರವಿಕುಮಾರ್ ಜಿಲ್ಲಾಧಿಕಾರಿ ದ.ಕ.ಜಿಲ್ಲೆ, ಡಾ.ಕುಮಾರ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ದ.ಕ.ಜಿಲ್ಲಾ ಪಂಚಾಯತ್, ಶಶಿಕುಮಾರ್, ಪೊಲೀಸ್ ಆಯುಕ್ತರು ಮಂಗಳೂರು, ಹೃಷಿಕೇಶ್ ಸೋನಾವಣೆ.ಎಸ್. ಪಿ.ದ.ಕ.ಜಿಲ್ಲೆ, ಮುರುಗೇಶ್ ಹಿರಿಯ ಪ್ರಬಂಧಕರು ಕೆಐಒಸಿಎಲ್ ಪಣಂಬೂರು, ಪುಷ್ಪರಾಜ್ ಜೈನ್ ಅಧ್ಯಕ್ಷ ಕ್ರೆಡೈ ಮಂಗಳೂರು, ಅಕ್ಷಯ್ ಶ್ರೀಧರ್, ಆಯುಕ್ತರು ಮಂಗಳೂರು ಮಹಾನಗರ ಪಾಲಿಕೆ, ಲಕ್ಷ್ಮೀಶ ಭಂಡಾರಿ ಪಾಲುದಾರರು,ಎಲ್ ಆರ್ ಎಸ್ ಬೀಚ್ ಟೂರಿಸಂ ಪಣಂಬೂರು, ಡಾ.ರಾಜೇಶ್ ಹುಕ್ಕೇರಿಪಾಲುದಾರರು, ಎಲ್ ಆರ್ ಎಸ್ ಬೀಚ್ ಟೂರಿಸಂ ಪಣಂಬೂರು.ಶ್ರೀನಿವಾಸ್ ನಾಯಕ್ ಇಂದಾಜೆ ಅಧ್ಯಕ್ಷ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ದಕ್ಷಿಣ ಕನ್ನಡ, ಡಾ .ನಾಗರತ್ನ ಕೆ. ಎ. ಸಂಯೋಜನಾಧಿಕಾರಿ, ರಾಷ್ಟ್ರೀಯ ಸೇವಾ ಯೋಜನೆ ಮಂಗಳೂರು ವಿಶ್ವವಿದ್ಯಾನಿಲಯ, ಪ್ರಶಾಂತ್ ಸನಿಲ್ ಪ್ರಧಾನ ಕಾರ್ಯದರ್ಶಿ ಕ್ರೆಡೈ ಮಂಗಳೂರು ಮೊದಲಾದವರು ಭಾಗವಹಿಸಲಿದ್ದಾರೆ.