ಮಂಗಳೂರು: ಐವರು ಸಾಧಕರಿಗೆ ರಚನಾ ಪ್ರಶಸ್ತಿ ಪ್ರದಾನ
ಮಂಗಳೂರು: ಐವರು ಸಾಧಕರಿಗೆ ರಚನಾ ಕ್ಯಾಥೊಲಿಕ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ವತಿಯಿಂದ ನೀಡಲಾಗುವ ರಚನಾ ಪ್ರಶಸ್ತಿಯನ್ನು ರವಿವಾರ ಪ್ರದಾನ ಮಾಡಲಾಯಿತು.
ಇಲ್ಲಿನ ಮಿಲಾಗ್ರೀಸ್ ಜ್ಯುಬಿಲಿ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಮಂಗಳೂರಿನ ಬಿಷಪ್ ವಂ.ಡಾ. ಪೀಟರ್ ಪಾಲ್ ಸಲ್ದಾನ ಪ್ರಶಸ್ತಿ ಪ್ರದಾನ ಮಾಡಿದರು.
ರಚನಾ ಉದ್ಯಮಿ ವಿಭಾಗದಲ್ಲಿ ಜೆರ್ರಿ ವಿನ್ಸೆಂಟ್ ಡಯಾಸ್ ಉಡುಪಿ , ರಚನಾ ಕೃಷಿ ವಿಭಾಗ ಲಿಯೋ ಫೆರ್ನಾಂಡಿಸ್ ಅಲ್ಲಿಪಾದೆ ,ವೃತ್ತಿಪರ ವಿಭಾಗ ಡಾ.ಗ್ಲಾಡಿಸ್ ಮಿನೇಜಸ್ ಕುಂದಾಪುರ, ರಚನಾ ಎನ್ ಆರ್ ಐ ಉದ್ಯಮಿ ಮೈಕೆಲ್ ಡಿ ಸೋಜಾ ದುಬೈ ಮತ್ತು ರಚನಾ ವರ್ಷದ ಮಹಿಳಾ ಪ್ರಶಸ್ತಿಯನ್ನು ಡಾ.ಲವಿನಾ ಎಂ ನೊರೊನ್ಹಾ ಮಂಗಳೂರು ಪಡೆದರು.
ಎಚ್ ಡಿಎಫ್ ಬ್ಯಾಂಕ್ ನ ಹಿರಿಯ ಕಾರ್ಯ ನಿರ್ವಾಹಕ ಉಪಾಧ್ಯಕ್ಷ ಎಂ.ಸಂಜಯ್ ಡಿ ಸೋಜಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಅಧ್ಯಕ್ಷ ವಿನ್ಸೆಂಟ್ ಕುಟಿನ್ಹಾ ಸ್ವಾಗತಿಸಿದರು. ಸಂಚಾಲಕ ಸಿಎ ರುಡಾಲ್ಫ್ ರೋಡ್ರಿಗಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಲವಿನಾ ಎಸ್.ಮೊಂತೆರೊ ವೇದಿಕೆಯಲ್ಲಿ ಉಪಸ್ಥಿತರಿದ್ದರು.