ನ. 24: ಕೆಸಿಎಫ್ ವತಿಯಿಂದ "ಮೆಹ್ಪಿಲೇ ಮುಸ್ತಫಾ" ಮೀಲಾದ್ ಸಮಾವೇಶ
ಮನಾಮ, ನ. 18: ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ ಅ) ಅವರ 1 ಜನ್ಮ ದಿನಾಚರಣೆಯ ಅಂಗವಾಗಿ ಅನಿವಾಸಿ ಕನ್ನಡಿಗರ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸಂಘಟನೆ ಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಬಹರೈನ್ ವತಿಯಿಂದ “ಸಹಿಷ್ಣುತೆಯ ಸಂದೇಶ ವಾಹಕ ” ಎಂಬ ಶೀರ್ಷಿಕೆಯಡಿಯಲ್ಲಿ “ಮೆಹ್ಪಿಲೇ ಮುಸ್ತಫಾ” ಮೀಲಾದ್ ಸಮಾವೇಶವು ನ. 24 ಸಂಜೆ 7 ಘಂಟೆಗೆ ಮನಾಮದಲ್ಲಿ ನಡೆಯಲಿದೆ.
ಕಾರ್ಯಕ್ರ್ರಮಕ್ಕೆ ಅಸ್ಸಯ್ಯದ್ ಫಝಲ್ ಪೂ ಕೋಯಮ್ಮ ತಂಗಳ್ ಕೂರ ದುಆ ಆಶೀರ್ವಚನ ನಡೆಸಲಿದ್ದಾರೆ. ರಫೀಕ್ ಸಅದಿ ದೇಲಂಬಾಡಿ ಮುಖ್ಯ ಪ್ರಭಾಷಣ ಮಾಡಲಿ ದ್ದಾರೆ . ಹಾಗೂ ಮಾಸ್ಟರ್ ಶಿಯಾನ್ ಉಳ್ಳಾಲ ನೇತೃತ್ವದಲ್ಲಿ ನಅತೇ ಶರೀಫ್ ಕಾರ್ಯಕ್ರಮ ನಡೆಯಲಿದ್ದು, ಪ್ರಸ್ತುತ ಕಾರ್ಯಕ್ರಮಕ್ಕೆ ಹಲವಾರು ಸಾಮಾಜಿಕ, ಧಾರ್ಮಿಕ ಉಲಮಾ ಉಮಾರಾ ನೇತಾರರು, ಕೆ ಸಿ ಎಫ್ ಐ ಎನ್ ಸಿ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಸ್ವಾಗತ ಸಮಿತಿಯ ಚೆರ್ಮ್ಯಾನ್ ಕಲಂದರ್ ಶರೀಫ್ ಕಕ್ಕೆಪದವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story