ಎ. 12: ದುಬೈ ಬಿಸಿನೆಸ್ ಫೋರಮ್ ವತಿಯಿಂದ ಕನ್ನಡಿಗರ ವಾರ್ಷಿಕ ಸಮ್ಮಿಲನ
ದುಬೈ: ಯುಎಇ ಕನ್ನಡಿಗಾಸ್ ಬಿಸಿನೆಸ್ ಫೋರಮ್ ಇದರ 2ನೇ ವಾರ್ಷಿಕ ಸಮ್ಮಿಲನ ಕಾರ್ಯಕ್ರಮವು ಎ.12ರಂದು ಸಂಜೆ 5ಗಂಟೆಗೆ ದೇರಾ ಸಿಟಿ ಸೆಂಟರ್ ಬಳಿ ಇರುವ ಪರ್ಲ್ ಸಿಟಿ ವ್ಯೂ ಹೋಟೆಲ್ ಸಭಾಂಗಣದಲ್ಲಿ ನಡೆಯಲಿದೆ.
ಕನ್ನಡಿಗರು ಕುಟುಂಬದ ಸಮಿತಿ ಸದಸ್ಯರುಗಳಾದ ರಫೀಕಲಿ ಕೊಡಗು, ಸುದೀಪ್ ದಾವಣಗೆರೆ, ಸೆಂತಿಲ್ ಬೆಂಗಳೂರು, ಮದು ಗೌಡರ್, ಮಮತಾ ರಾಘವೇಂದ್ರ ಬೆಂಗಳೂರು, ಮಮತಾ ಶಾರ್ಜಾ, ಪಲ್ಲವಿ ಬಸವರಾಜ್,ಶಶಿಧರ್, ವೆಂಕಟೇಶ್, ಡಾ. ಸವಿತಾ ಮೋಹನ್, ಅನಿತಾ ರಾಮ್, ವಿಷ್ಣುಮೂರ್ತಿ ಮೈಸೂರು, ಹಾದಿಯ ಮಂಡ್ಯ, ಸತೀಶ್ ಮಸೂರ್ ಅವರು ಈ ಕುರಿತು ಶಾರ್ಜಾದಲ್ಲಿ ಪತ್ರಿಕೆ ಹೇಳಿಕೆ ನೀಡಿದರು.
Next Story