ಬೈಶ್: ಇಂಡಿಯನ್ ಸೋಶಿಯಲ್ ಫೋರಮ್ ವತಿಯಿಂದ ಇಫ್ತಾರ್ ಮೀಟ್
ಸೌದಿ ಅರೇಬಿಯಾ, ಜೂ.2: ಇಂಡಿಯನ್ ಸೋಶಿಯಲ್ ಫೋರಮ್ ಕರ್ನಾಟಕ ಚಾಪ್ಟರ್ ಇದರ ಬೈಶ್ ಘಟಕದ ವತಿಯಿಂದ ಅನಿವಾಸಿ ಕನ್ನಡಿಗರಿಗಾಗಿ ಇಫ್ತಾರ್ ಮೀಟ್ ಇತ್ತೀಚೆಗೆ ಬೈಶ್ ನ ಅಲ್ ವಹಾ ಆಡಿಟೋರಿಯಂನಲ್ಲಿ ನಡೆಯಿತು.
ಇಂಡಿಯನ್ ಸೋಶಿಯಲ್ ಫೋರಮ್ ಜಿಲ್ಲಾ ಕೇಂದ್ರ ಸಮಿತಿಯ ಸದಸ್ಯ ಸಲೀಂ ಗುರುವಾಯನಕೆರೆ ರಮಝಾನ್ ಸಂದೇಶ ಹಾಗೂ ಭಾರತದ ಸದ್ಯದ ಪರಿಸ್ಥಿತಿ ಬಗ್ಗೆ ಮಾತನಾಡಿದರು.
ಇಂಡಿಯನ್ ಸೋಶಿಯಲ್ ಫೋರಮ್ ಮುಖಂಡರಾದ ಸಿದ್ದೀಕ್ ಉಪ್ಪಿನಂಗಡಿ, ಅರ್ಷದ್ ಪಡುಬಿದ್ರೆ, ಇಕ್ಬಾಲ್ ಕೂಳೂರು, ಕಲಂದರ್ ನೌಶಾದ್ ಕರ್ನಿರೆ, ಝಹೀರ್ ಉಡುಪಿ ಭಾಗವಹಿಸಿದ್ದರು. ಇಂಡಿಯನ್ ಸೋಶಿಯಲ್ ಫೋರಮ್ ಇದರ ಸಾಮುದಾಯಿಕ ಸೇವೆಗಳ ಬಗ್ಗೆ ಹಾಗೂ ಸಂಘಟನೆಯ ಸಾಮಾಜಿಕ ಕಳಕಳಿಯ ಬಗ್ಗೆ ಕಾರ್ಯಕ್ರಮದಲ್ಲಿ ಮಾಹಿತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಬೈಶ್ ನ ಹಲವಾರು ಅನಿವಾಸಿ ಕನ್ನಡಿಗರು ಭಾಗವಹಿಸಿದ್ದರು.
ಇರ್ಷಾದ್ ಸುರತ್ಕಲ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
Next Story