ಹೊಸಂಗಡಿ: 'ಬ್ಲಡ್ ಡೋನರ್ಸ್ ಮಂಗಳೂರು' ವತಿಯಿಂದ ರಕ್ತದಾನ ಶಿಬಿರ
ಮಂಗಳೂರು, ನ. 6: ಬ್ಲಡ್ ಡೋನರ್ಸ್ ಮಂಗಳೂರು ತಂಡದ ಮೂರನೆ ವರ್ಷಾಚರಣೆಯ ಪ್ರಚಾರಾರ್ಥವಾಗಿ ದಾರೂಲ್ ಉಲೂಮ್ ಮದ್ರಸ ದುರ್ಗಿಪಲ್ಲ, ಹೊಸಂಗಡಿ ಇದರ ವಠಾರದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು ಹಾಗೂ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ಇದರ ಸಹಭಾಗಿತ್ವದಲ್ಲಿ ಬೃಹತ್ ರಕ್ತದಾನ ಶಿಬಿರ ಹಾಗೂ ರಕ್ತದಾನದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ದಾರುಲ್ ಉಲೂಮ್ ಮದರಸದ ಅಧ್ಯಕ್ಷ ತಲಕ್ಕರ ಮೊಯ್ದಿನ್ ಹಾಜಿ, ಹೊಸಂಗಡಿ ಟೌನ್ ಮಸ್ಜಿದ್ ಅಧ್ಯಕ್ಷ ಯಾಫ್ಕೋ ಹಮೀದ್ ಹಾಜಿ, ವರ್ಕಾಡಿ ರೇಂಜ್ ಮ್ಯಾನೇಜ್ಮೆಂಟ್ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ, ಮಂಜೇಶ್ವರ ಪಂಚಾಯತ್ ಸದಸ್ಯ ಬಷೀರ್ ಕಾಣಿಲ, ದಾರುಲ್ ಉಲೂಮ್ ಮದರಸದ ಕಾರ್ಯದರ್ಶಿಯಾದ ಖಾಲಿದ್ , ಧರ್ಮಗುರುಗಳಾದ ಎನ್ ಎಂ ಅಬ್ದುಲ್ಲಾ ಮದನಿ, ದುರ್ಗಿಪಲ್ಲ ಮಸೀದಿ ಖತೀಬ್ ಮಹಮೂದ್ ಮುಸ್ಲಿಯಾರ್
ಬ್ಲಡ್ ಡೋನರ್ಸ್ ಮಂಗಳೂರು ಇದರ ಅಧ್ಯಕ್ಷ ಸಿದ್ದಿಕ್ ಮಂಜೇಶ್ವರ, ಅಡ್ಮಿನ್ ಗಳಾದ ಮುಸ್ತಾಫಾ ಕೆ ಸಿ ರೋಡ್, ಇರ್ಷಾದ್ ಉಚ್ಚಿಲ, ಮುನೀರ್ ಚೆಂಬುಗುಡ್ಡೆ, ಸಲಾಂ ಚೆಂಬುಗುಡ್ಡೆ ಸದಸ್ಯರಾದ ಶೆಹಬಾಜ್ ಮೊಯ್ದಿನ್ ಯಾಫ್ಕೋ, ರಫೀಕ್ ಪೀರಾರಮೂಲ, ರಝಾಕ್ ಆಚಾರಿಮೂಲ, ಕುಂಚಿಮೋನು ಉಪಸ್ಥಿತರಿದ್ದರು.
ಊರಿನ ಹಲವು ಗಣ್ಯರು, ನಾಗರಿಕರು ಭಾಗವಹಿಸಿದ ಕಾರ್ಯಕ್ರಮದಲ್ಲಿ ಹಲವಾರು ರಕ್ತದಾನಿಗಳು ರಕ್ತದಾನ ಮಾಡಿದರು.