ಹಳೆಯಂಗಡಿ: ಬಾಲಕನ ಚಿಕಿತ್ಸೆಗೆ ಸಹಾಯಕ್ಕಾಗಿ ಮನವಿ
ಹಳೆಯಂಗಡಿ, ಜ. 30: ಬೊಳ್ಳೂರು ಇಂದಿರಾನಗರ ಎಂಬಲ್ಲಿನ ಬಡತನದಲ್ಲಿರುವ ಆಸಿಯಾ ಎಂಬುವವರ ಪುತ್ರ ಆರು ವರ್ಷದ ಮಹಮ್ಮದ್ ಸವಾನ್ ತನ್ನ ಎರಡೂ ಕಾಲಿನ ಬಲ ಕಳೆದುಕೊಂಡು ಅಂಗವೈಕಲ್ಯಗೀಡಾಗಿದ್ದು, ದಾನಿಗಳಿಂದ ಚಿಕಿತ್ಸೆಗೆ ನೆರವನ್ನು ಕೋರಲಾಗಿದೆ.
ಬಡ ಕುಟುಂಬದಲ್ಲಿ ಹುಟ್ಟಿದ ಆಸಿಯಾ ತನ್ನ ಪತಿಯ ದುರಬ್ಯಾಸದ ಕಿರುಕುಳದಿಂದ ಬೇಸತ್ತು ತನ್ನೆರಡು ಮಕ್ಕಳೊಂದಿಗೆ ಸಹೋದರಿಯರ ಆಶ್ರಯದಲ್ಲಿ ಬೀಡಿಕಟ್ಟಿ ಜೀವನ ಸಾಗಿಸುತ್ತಿದ್ದಾರೆ.
ಸವಾನ್ ನನ್ನು ಈಗಾಗಲೆ ತಜ್ಞ ವೈದ್ಯರ ಬಳಿ ಪರೀಕ್ಷಿಸಿದ್ದು, ಒಂದು ವರ್ಷಗಳ ತನಕ ಸೂಕ್ತ ಚಿಕಿತ್ಸೆ ಮಾಡಿದಲ್ಲಿ ಮಗುವಿನ ಎರಡೂ ಕಾಲುಗಳಿಗೆ ಬಲ ಬಂದು ನಡೆದಾಡುವ ಸಾಧ್ಯತೆಗಳಿವೆ ಎಂದು ವೈದ್ಯರು ಸಲಹೆ ನೀಡಿರುತ್ತಾರೆ.
ಆದರೆ ಎರಡು ಹೊತ್ತು ಊಟಕ್ಕೂ ಪರದಾಡುವ ಆಸಿಯಾರ ಕುಂಟುಂಬಕ್ಕೆ ಮಗುವಿನ ಚಿಕಿತ್ಸೆಯ ವೆಚ್ಚ ಭರಿಸಲು ಅಸಾಧ್ಯವಾಗಿದ್ದು, ದಾನಿಗಳು ಸಹಕರಿಸಿ ನೆರವಾಗಬೇಕಾಗಿ ಪ್ರಕಟನೆಯಲ್ಲಿ ವಿನಂತಿಸಿದ್ದಾರೆ.
ASIA.
A/c NO : 0637101206996.
CANARA BANK .
HALEANGADI BRANCH.
NH.66. HALEANGADY.
MANGALORE-574146.
ಮೊ: 918197320796.