ಬಂದ್: ದ.ಕ. ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ
ಮಂಗಳೂರು, ಮೇ 28: ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ 24 ಗಂಟೆಗಳೇ ಕಳೆದರೂ ರೈತರ ಸಾಲಮನ್ನಾ ಮಾಡದೆ ವಚನಭ್ರಷ್ಟರಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕರೆ ನೀಡಿದ್ದ ಸ್ವಯಂಪ್ರೇರಿತ ಬಂದ್ಗೆ ದ.ಕ. ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮಂಗಳೂರು ಸೇರಿದಂತೆ ಜಿಲ್ಲಾದ್ಯಂತ ಬೆಳಗ್ಗೆಯಿಂದಲೇ ಬಸ್, ಆಟೊ ರಿಕ್ಷಾ ಸೇರಿದಂತೆ ವಾಹನಗಳ ಸಂಚಾರ ಎಂದಿನಂತೆ ಇದೆ. ಅಂಗಡಿಮುಂಗಟ್ಟುಗಳು, ಕಚೇರಿಗಳು ಎಂದಿನಂತೆ ತೆರೆದಿವೆ. ಅದೇರೀತಿ ಇಂದು ರಾಜ್ಯಾದ್ಯಂತ ಶಾಲಾ ಪ್ರಾರಂಭಗೊಂಡಿದ್ದು, ಶಾಲೆಗಳೂ ತೆರೆದಿವೆ.
ಬೆಳ್ತಂಗಡಿಯಲ್ಲೂ ಬಂದ್ ಗೆ ಶೂನ್ಯ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮಾಮೂಲಿಯಂತೆ ಅಂಗಡಿ, ಹೋಟೆಲ್ ಗಳು ತೆರೆದಿವೆ. ಸೋಮವಾರದ ಸಂತೆ ಎಂದಿನಂತಿದ್ದರೆ, ಖಾಸಗಿ, ಸರಕಾರಿ ಬಸ್ಸುಗಳು, ಆಟೋ ರಿಕ್ಷಾಗಳ ಓಡಾಡುತ್ತಿವೆ.
ಬಿಜೆಪಿಯ ಬಂದ್ ಕರೆಗೆ ದ.ಕ. ಜಿಲ್ಲೆಯಲ್ಲಿ ಯಾವುದೇ ಸಂಘಟನೆಗಳು ಬೆಂಬಲ ಸೂಚಿಸಿಲ್ಲ.
Next Story