ಶಾರ್ಜಾ: ಪುಸ್ತಕ ಮೇಳದಲ್ಲಿ ಶಾಂತಿ ಪ್ರಕಾಶನ ಮಳಿಗೆ ಉದ್ಘಾಟನೆ
ಮಂಗಳೂರು/ ಶಾರ್ಜಾ, ನ.4: ಶಾರ್ಜಾ ಅಂತಾರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಮಂಗಳೂರಿನ ಪ್ರಖ್ಯಾತ ಶಾಂತಿ ಪ್ರಕಾಶನದ ಪುಸ್ತಕ ಮಳಿಗೆಯನ್ನು ಯುಎಈ ಎಕ್ಸ್ಚೇಂಜ್ನ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಸುಧೀರ್ಕುಮಾರ್ ಶೆಟ್ಟಿ ಇತ್ತೀಚೆಗೆ ಉದ್ಘಾಟಿಸಿದರು.
ಲೇಖಕಿ ಖದೀಜಾ ನುಸ್ರತ್ ರಚಿಸಿದ ‘ಕುರ್ಆನ್- ಒಂದು ಚಿಂತನೆ’ ಎಂಬ ಶಾಂತಿ ಪ್ರಕಾಶನ ಪ್ರಕಟಿಸಿದ ಪುಸ್ತಕವನ್ನು ಮುಹಮ್ಮದ್ ಅಲಿ ಉಚ್ಚಿಲ್ ಲೋಕಾರ್ಪಣೆಗೊಳಿಸಿ, ಶುಭ ಹಾರೈಸಿದರು.
ಬ್ಯಾರೀಸ್ ವೆಲ್ಫೇರ್ ಫೋರಮ್ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಈರ್ಷಾದ್ ಮೂಡುಬಿದಿರೆ, ಶಂಸುದ್ದೀನ್, ಅಬ್ದುಲ್ ಸಲಾಂ ದೇರಳಕಟ್ಟೆ, ವಿ.ಕೆ.ರಶೀದ್, ಇಮ್ರಾನ್ ಅಹ್ಮದ್, ಬಷೀರ್ ವಿ.ಕೆ. ಮತ್ತು ಐಸಿಸಿಯ ಇತರ ಪದಾಧಿಕಾರಿಗಳು ಇದ್ದರು. ಎ.ಕೆ.ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.
Next Story