ಯಲ್ಲಾಪುರ: ಸಾಮಾಜಿಕ ಕಾರ್ಯಕರ್ತ ಅಬ್ದುಲ್ ರಹ್ಮಾನ್ ಬ್ಯಾರಿ ನಿಧನ
ಯಲ್ಲಾಪುರ: ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಸಾಮಾಜಿಕ ಕಾರ್ಯಕರ್ತ, ಮುಸ್ಲಿಮ್ ಮುಖಂಡ, ವಿವಿಧ ಸಾಮಾಜಿಕ ಶೈಕ್ಷಣಿಕ ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಮುಮ್ತಾಝ್ ಹೊಟೇಲ್ ಮಾಲಕ ಅಬ್ದುಲ್ ರಹ್ಮಾನ್ ಹಸನ್ ಬ್ಯಾರಿ (67)ರವಿವಾರ ನಿಧರಾದರು.
ಇವರು ಉತ್ತರ ಕನ್ನಡ ಮುಸ್ಲಿಮ್ ಯುನೈಟೆಡ್ ಫೋರಂ ಸ್ಥಾಪಕ ಸದಸ್ಯರಲ್ಲೋರ್ವರಾಗಿದ್ದು ಇವರ ಮಿಲ್ಲತ್ ಶಿಕ್ಷಣ ಸಂಸ್ಥೆ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳನ್ನು ಕಟ್ಟಿ ಬೆಳಿಸಿದ್ದರು.
ಅವರಿಗೆ ಇಂದು ಬೆಳಗ್ಗೆ ಎದೆ ನೋವು ಕಾಣಿಸಿಕೊಂಡ ನಂತರ ನಿಧನರಾದರು ಎಂದು ತಿಳಿದುಬಂದಿದೆ. ರಾತ್ರಿ ಇಶಾ ನಮಾಝ್ ನಂತರ ಅಂತ್ಯಸಂಸ್ಕಾರವನ್ನು ಮಾಡಲಾಯಿತು.
ಹಸನ್ ಬ್ಯಾರಿ ಅವರ ನಿಧನಕ್ಕೆ ಉತ್ತರಕನ್ನಡ ಮುಸ್ಲಿಮ್ ಯುನೈಟೆಡ್ ಫೋರಂ ಅಧ್ಯಕ್ಷ ಇಮ್ತಿಯಾಝ್ ಶೇಖ್, ಪ್ರ.ಕಾ. ಮೊಹ್ಸಿನ್ ಖಾಝಿ, ಭಟ್ಕಳದ ತಂಝೀಮ್ ಅಧ್ಯಕ್ಷ ಎಸ್.ಎಂ. ಪರ್ವಾಝ್, ರಾಬಿತಾ ಮಿಲ್ಲತ್ ಅಧ್ಯಕ್ಷ ನ್ಯಾಯಾವಾದಿ ಎ.ಪಿ ಮುಜಾವರ್, ಪ್ರ.ಕಾ. ತಲ್ಹಾ ಸಿದ್ದಿಬಾಪಾ, ಭಟ್ಕಳದ ಡಾ. ಮುಹಮ್ಮದ್ ಹನೀಫ್ ಶಬಾಬ್, ಸೈಯ್ಯದ್ ಮುಹಿಯುದ್ದೀನ್ ಬರ್ಮಾವರ್, ಯಾಹ್ಯಾ ದಾಮೂದಿ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.