ವಿಟ್ಲದಲ್ಲಿ ಶಿಕ್ಷಕ ಬಿ.ಎಂ.ತುಂಬೆಗೆ ಬೀಳ್ಕೊಡುಗೆ
ವಿಟ್ಲ, ಜೂ.25: ಉತ್ತರ ಅಮೆರಿಕದ ದಕ್ಷಿಣ ವರ್ಜಿನಿಯದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಸ್ಕೌಟ್ ಮತ್ತು ಗೈಡ್ ಜಾಂಬೂರಿ ಕಾರ್ಯಕ್ರಮಕ್ಕೆ ಭಾರತದಿಂದ ಆಯ್ಕೆಗೊಂಡ ಶಿಕ್ಷಕ ಬಿ.ಎಂ.ತುಂಬೆ ಅವರಿಗೆ ವಿಟ್ಲದ ನ್ಯಾಯವಾದಿ ಅಬೂಬಕರ್ ನೋಟರಿ ಮತ್ತು ರಶೀದ್ ವಿಟ್ಲ ಅವರ ತಂಡದ ವತಿಯಿಂದ ಸನ್ಮಾನ ಕಾರ್ಯಕ್ರಮ ವಿಟ್ಲದ ಪೊನ್ನೋಟ್ಟು ನಲ್ಲಿ ಸೋಮವಾರ ನಡೆಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಕ ಬಿ.ಎಂ.ತುಂಬೆ, ಸಾಧಕನನ್ನು ಗುರುತಿಸಿಕೊಡುವ ಪ್ರಶಸ್ತಿ ಶ್ರೇಷ್ಠ ಪ್ರಶಸ್ತಿಯಾಗಿದೆ. ಸ್ವಪ್ರಯತ್ನದಿಂದ ಅರ್ಜಿ ಹಾಕಿ ಪ್ರಶಸ್ತಿ ಪಡೆಯುವುದು ಅದು ನಿಜವಾದ ಪ್ರಶಸ್ತಿಯಲ್ಲ. ಸಂಬಂಧ ಬೆಸೆಯುವ ಕಾರ್ಯಕ್ರಮ ಆಯೋಜಿಸುವುದರಿಂದ ಸೌಹಾರ್ದ ಗಟ್ಟಿಯಾಗುತ್ತದೆ ಎಂದರು.
ಲಯನ್ಸ್ ಜಿಲ್ಲೆ 317-ಡಿ ಇದರ ಉಪ ರಾಜ್ಯಪಾಲ ಡಾ.ಗೀತಾಪ್ರಕಾಶ್ ಎ. ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು. ಗೌರವ ಸ್ವೀಕರಿಸಿ ಮಾತನಾಡಿದ ಅವರು ವಿವಿಧ ಧರ್ಮಗಳ ಹಬ್ಬಗಳ ಆಚರಣೆಗಳನ್ನು ಅರ್ಥ ಮಾಡಿಕೊಂಡು ಬದುಕುವುದೇ ನಿಜವಾದ ಧರ್ಮವಾಗಿದೆ. ಸ್ಥಳೀಯ ಅವಶ್ಯಕತೆಗಳಿಗೆ ಜಾತಿ ಧರ್ಮದ ಹಂಗಿಲ್ಲದೇ ಸ್ಪಂದಿಸುತ್ತಾ ಇತರರಿಗೆ ಮಾಡುವ ಸಹಕಾರವೇ ನಿಜವಾದ ಸೇವೆಯಾಗಿದೆ ಎಂದು ಹೇಳಿದರು.
ಎಂ.ಫ್ರೆಂಡ್ಸ್ ಅಧ್ಯಕ್ಷ ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಸಂತೋಷ್ ಶೆಟ್ಟಿ, ವಿಟ್ಲ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಇಬ್ರಾಹಿಂ ಏರ್ ಸೌಂಡ್ಸ್, ನ್ಯಾಯವಾದಿ ಅಬೂಬಕರ್ ನೋಟರಿ ವಿಟ್ಲ ಮೊದಲಾದವರು ಉಪಸ್ಥಿತರಿದ್ದರು.
ಲತೀಫ್ ನೇರಳಕಟ್ಟೆ, ರಫೀಕ್ ಹಾಜಿ ಪಾಣೆಮಂಗಳೂರು, ರಫೀಕ್ ಕಲ್ಲಡ್ಕ, ಪ್ರಾಂಶುಪಾಲ ಲತೀಫ್ ನೀರ್ಕಜೆ, ಉಪನ್ಯಾಸಕ ಅಬ್ದುರ್ರಝಾಕ್ ಅನಂತಾಡಿ, ಪಿ.ಮುಹಮ್ಮದ್ ಪಾಣೆಮಂಗಳೂರು, ಅಬ್ದುಲ್ ಹಮೀದ್ ಗೋಳ್ತಮಜಲು, ಪತ್ರಕರ್ತ ಮುಹಮ್ಮದಲಿ ವಿಟ್ಲ, ಉಪನ್ಯಾಸಕ ಝುಬೈರ್ ವಿಟ್ಲ, ಮುಹಮ್ಮದ್ ಎ.ಎಸ್. ಮಾರ್ಟ್, ಕಲಂದರ್ ಕನ್ಯಾನ, ಮುಸ್ತಫ ಖಲೀಲ್, ಅಬ್ದುರ್ರಹ್ಮಾನ್ ಹಾಜಿ ಕೇಪು, ಹಕೀಂ ಕಲಾಯಿ, ಅಬೂಬಕರ್ ಅನಿಲಕಟ್ಟೆ, ಮುಹಮ್ಮದ್ ಇಕ್ಬಾಲ್ ಹೋನೆಸ್ಟ್, ಬಿ.ಎ.ಮುಹಮ್ಮದ್ ಅಲಿ ಬಂಟ್ವಾಳ, ಶೇಕ್ ರಹ್ಮತುಲ್ಲ ರಝಾನಗರ, ಸುಲೈಮಾನ್ ಸೂರಿಕುಮೇರು, ಮನೋಜ್ ಕುಮಾರ್ ರೈ ಉಪಸ್ಥಿತರಿದ್ದರು.
ಎಂ.ಫ್ರೆಂಡ್ಸ್ ಕಾರ್ಯದರ್ಶಿ ರಶೀದ್ ವಿಟ್ಲ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಅಬ್ದುರ್ರರಝಾಕ್ ಪರಿಚಯ ಮಾಡಿದರು.