ಕೈಕಂಬ ತಲುಪಿದ ಬ್ರಹ್ಮರಥ: ಮುಸ್ಲಿಮರಿಂದ ಸ್ವಾಗತ, ತಂಪು ಪಾನೀಯ ವಿತರಣೆ
ಬಂಟ್ವಾಳ, ಅ.1: ಕುಕ್ಕೆ ಸುಬ್ರಹ್ಮಣ್ಯಕ್ಕೆ ಉದ್ಯಮಿ ಮುತ್ತಪ್ಪರೈ ದೇರ್ಲ ಮತ್ತು ಅಜಿತ್ ಶೆಟ್ಟಿ ಕಡಬ ಕೊಡುಗೆಯಾಗಿ ನೀಡಿರುವ ಬ್ರಹ್ಮರಥ ಮಂಗಳವಾರ ಕದ್ರಿಯಿಂದ ಹೊರಟು ಬಿ.ಸಿ.ರೋಡ್ ಕೈಕಂಬ ತಲುಪಿದಾಗ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಕೈಕಂಬದ ಮುಸ್ಲಿಮರು ರಥವನ್ನು ಸ್ವಾಗತಿಸಿದರಲ್ಲದೆ, ಮೆರವಣಿಗೆಯಲ್ಲಿ ಬಂದ ಬಂದವರಿಗೆ ತಂಪು ಪಾನೀಯ ಹಾಗೂ ಲಡ್ಡು ವಿತರಿಸುವ ಮೂಲಕ ಸೌಹಾರ್ದ ಮೆರೆದರು.
ಬಳಿಕ ಬಿ.ಸಿ.ರೋಡಿನಲ್ಲಿ ಬಂಟ್ವಾಳದ ಭಕ್ತಾದಿಗಳ ಪರವಾಗಿ ಶಾಸಕ ರಾಜೇಶ್ನಾಯ್ಕ್ ಉಳಿಪ್ಪಾಡಿ ಬ್ರಹ್ಮರಥವನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದರು.