ಸೂರಿಕುಮೇರು ಮಸೀದಿಯಲ್ಲಿ ಸಂಭ್ರಮದ ಮೀಲಾದುನ್ನಬಿ
ಬಂಟ್ವಾಳ, ನ. 12: ಸೂರಿಕುಮೇರು ಬದ್ರಿಯಾ ಜುಮಾ ಮಸೀದಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಕಾರ್ಯಕ್ರಮವು ಜರಗಿತು.
ಖತೀಬ್ ಡಿ.ಎಸ್. ಅಬ್ದುರ್ರಹ್ಮಾನ್ ಮದನಿ ಉಳ್ತೂರು ಸದರ್ ಅಬ್ದುಸ್ಸಲಾಂ ಹನೀಫಿ ಕಬಕ ಪ್ರಭಾಷಣ ನಡೆಸಿದರು. ಅಧ್ಯಾಪಕ ಸುಲೈಮಾನ್ ಮುಸ್ಲಿಯಾರ್ ಗುರುವಾಯನಕೆರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೌಲೂದ್ ಮಜ್ಲಿಸ್ನಲ್ಲಿ ಝೈನುಲ್ ಉಲಮಾ ಮಾಣಿ ಉಸ್ತಾದ್ ದುಆ ಮಾಡಿದರು.
ಅಧ್ಯಕ್ಷ ಮೂಸಾ ಕರೀಂ ಮಾಣಿ, ಕಾರ್ಯದರ್ಶಿ ಅಮೀರುದ್ದೀನ್, ಕೋಶಾಧಿಕಾರಿ ಹಮೀದ್ ಕಾರ್ಯಕಾರಿ ಸಮಿತಿಯ ಬಶೀರ್ ಸೂರಿಕುಮೇರು, ಹಂಝ ಕಾಯರಡ್ಕ, ಉಞಾಕ, ಇಸ್ಮಾಯಿಲ್, ರಫೀಕ್ ಪಟ್ಲಕೋಡಿ, ಅಬ್ದುರ್ರಹ್ಮಾನ್ ಪುತ್ತು, ಮುಹಮ್ಮದಾಲಿ ಮುಸ್ಲಿಯಾರ್, ಯೂಸುಫ್ ಹಾಜಿ, ಹನೀಫ್ ಸಂಕ ಉಪಸ್ಥಿತರಿದ್ದರು.
ಅಲ್ ಅಮೀನ್ ವೆಲ್ಫೇರ್ ಅಸೋಸಿಯೇಶನ್ ಮಾಣಿ, ಬದ್ರಿಯಾ ಫೌಂಡೇಶನ್ ಸೂರಿಕುಮೇರು, ಜಿಎಸ್ಎಫ್ ಗಲ್ಫ್ ಸಮಿತಿ, ಬದ್ರಿಯಾ ಫ್ರೆಂಡ್ಸ್ ಯಂಗ್ ಮೆನ್ಸ್ ಸೂರಿಕುಮೇರು ಸಂಘಟನೆಗಳು ಸಹಕಾರ ನೀಡಿತ್ತು. ಸದರ್ ಉಸ್ತಾದ್ ಕಾರ್ಯಕ್ರಮ ನಿರೂಪಿಸಿದರು.
Next Story