ಮಂಜನಾಡಿ ಅಲ್ ಮದೀನಾದಲ್ಲಿ ಗಣರಾಜ್ಯೋತ್ಸವ
ಮಂಗಳೂರು, ಜ.26: ಮಂಜನಾಡಿಯ ಅಲ್ ಮದೀನಾ ವಿದ್ಯಾ ಸಂಸ್ಥೆಯಲ್ಲಿ ರವಿವಾರ ಗಣರಾಜ್ಯೋತ್ಸವ ಆಚರಿಸಲಾಯಿತು.
ಸಂಸ್ಥೆಯ ಸಂಚಾಲಕ ಅಬ್ದುಲ್ಲ ಹಾಜಿ ಮೋರ್ಲ ಅಧ್ಯಕ್ಷತೆ ವಹಿಸಿದ್ದರು. ಧ್ವಜಾರೋಹಣಗೈದು ಮಾತನಾಡಿದ ಸಂಸ್ಥೆಯ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ‘ಸಂವಿಧಾನ ಉಳಿಸಲು ಹೋರಾಟ ಮಾಡಬೇಕಿದೆ ಎಂದರು.
ನಿರ್ದೇಶಕ ಅಬ್ದುಲ್ಲ ಕುಂಞಿ ಅಮ್ಜದಿ ಮಾತಾನಾಡಿದರು. ಅತಿಥಿಗಳಾಗಿ ಕೆ.ಎಂ.ಕೆ. ಮಂಜನಾಡಿ, ಮುಖ್ಯ ಶಿಕ್ಷಕ ಮುಹಮ್ಮದ್ ಮಲಾರ್, ಮುಹಮ್ಮದ್ ಹನೀಫ್, ಪಿಯು ವಿಭಾಗದ ಪ್ರಾಂಶುಪಾಲೆ ಸಂಗೀತಾ ಭಾಗವಹಿಸಿದ್ದರು.
ಪ್ರಾಂಶುಪಾಲ ಅಬೂಬಕರ್ ಸ್ವಾಗತಿಸಿದರು. ಹಾರಿಸ್ ಮಾಸ್ಟರ್ ವಂದಿಸಿದರು.
Next Story