ಮಂಗಳೂರು: ಸ್ಟೇಟ್ ಬ್ಯಾಂಕ್ ನಲ್ಲಿರುವ ಮೀನು ಮಾರುಕಟ್ಟೆ ಬಂದ್
ಜನಜಾಗೃತಿ ಸಮಾವೇಶಕ್ಕೆ ಬೆಂಬಲ
ಮಂಗಳೂರು, ಜ.27: ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಅರಿವು ಮೂಡಿಸುವುದಕ್ಕಾಗಿ ದ.ಕ. ಜಿಲ್ಲಾ ಬಿಜೆಪಿ ವತಿಯಿಂದ ಕೂಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿ ಸೋಮವಾರ ಅಪರಾಹ್ನ ಆಯೋಜಿಸಿರುವ ಜನಜಾಗೃತಿ ಸಮಾವೇಶಕ್ಕೆ ಕ್ಷಣಗಣನೆ ಆರಂಭಗೊಂಡಿದೆ.
ಮುಖ್ಯ ಭಾಷಣಕಾರರಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾಗವಹಿಸಲಿದ್ದಾರೆ.
ಈ ಸಮಾವೇಶಕ್ಕೆ ಬೆಂಬಲ ಸೂಚಿಸಿ ನಗರದ ಸ್ಟೇಟ್ ಬ್ಯಾಂಕ್ನಲ್ಲಿರುವ ಮೀನು ಮಾರುಕಟ್ಟೆ ಬೆಳಗ್ಗೆಯಿಂದಲೇ ಬಂದ್ ಮಾಡಲಾಗಿದೆ. ಇದರಿಂದ ಸದಾ ಜನರಿಂದ ಗಿಜಿಗುಡುತ್ತಿರುವ ಮೀನು ಮಾರುಕಟ್ಟೆ ಇಂದು ಬೆಳಗ್ಗೆಯಿಂದ ಬಿಕೊ ಎನ್ನುತ್ತಿದೆ.
Next Story