ಕುಂದಾಪುರ: ಸೇತುವೆಯಿಂದ ನದಿಗೆ ಹಾರಿದ ಉದ್ಯಮಿಯ ಮೃತದೇಹ ಪತ್ತೆ
ಕುಂದಾಪುರ, ಜ.27: ಕುಂದಾಪುರ ಸಂಗಮ್ ಹೇರಿಕುದ್ರು ಸೇತುವೆಯಿಂದ ಜ.26ರಂದು ಸಂಜೆ ವೇಳೆ ನದಿಗೆ ಹಾರಿ ನಾಪತ್ತೆಯಾಗಿದ್ದ ಉದ್ಯಮಿ, ಕುಂದಾಪುರ ಚಿಕನ್ಸಾಲ್ ರಸ್ತೆಯ ನಿವಾಸಿ ಕೆ.ಜಿ.ಗಣೇಶ್(50) ಎಂಬವರ ಮೃತದೇಹ ಇಂದು ಬೆಳಗ್ಗೆ ಹೆಮ್ಮಾಡಿ ಬಳಿಯ ಹೊಳೆಯಲ್ಲಿ ಪತ್ತೆಯಾಗಿದೆ.
ಕಳೆದ 25 ವರ್ಷಗಳ ಕಾಲ ಮುಂಬಯಿಯಲ್ಲಿ ಹೊಟೇಲ್ ನಡೆಸುತ್ತಿದ್ದ ಇವರು, ನಾಲ್ಕೈದು ವರ್ಷಗಳ ಹಿಂದೆ ಹೊಟೇಲನ್ನು ಲೀಸ್ಗೆ ನೀಡಿ, ಊರಿಗೆ ಬಂದು ನೆಲೆಸಿದ್ದರು. ಕುಡಿತದ ಚಟ ಹಾಗೂ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ವರು ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಿನ್ನೆ ಸಂಜೆಯಿಂದ ಇವರಿಗಾಗಿ ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ತೀವ್ರ ಹುಡುಕಾಟ ನಡೆಸಿದ್ದರು. ಇವರು ನದಿಗೆ ಹಾರುವ ಸಂದರ್ಭ ಹೃದಯಾಘಾತ ದಿಂದ ಮೃತಪಟ್ಟಿರ ಬಹುದೆಂದು ಶಂಕಿಸಲಾಗಿದೆ.
ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Next Story