ನಾಯರ್ಕೆರೆ: ಹಾಶಿಮಿ ಮಸೀದಿಯಲ್ಲಿ ಜಮಾಅತ್ ನಮಾಝ್ ತಾತ್ಕಾಲಿಕ ಸ್ಥಗಿತ
ಉಡುಪಿ, ಮಾ.23: ಕೊರೋನ ವೈರಸ್ ಸೋಂಕು ಹರಡುವ ಭೀತಿಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಾಯರ್ಕೆರೆ ಹಾಶಿಮಿ ಮಸೀದಿಯಲ್ಲಿ ಎಲ್ಲ ಸಾಮೂಹಿಕ ನಮಾಝ್(ಜಮಾಅತ್)ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಆಪತ್ಕಾಲದಲ್ಲಿ ನಮಾಝ್ನ್ನು ಮನೆಯಲ್ಲೇ ನಿರ್ವಹಿಸಲು ಇಸ್ಲಾಮ್ ಉಪದೇಶಿಸಿದ್ದು, ಆದುದರಿಂದ ಮಸೀದಿಯಲ್ಲಿ ಅಝಾನ್ ಹೊರತಾದ ಇತರ ಎಲ್ಲ ಧಾರ್ಮಿಕ ವಿಧಿಯನ್ನು ಅನಿರ್ದಿಷ್ಟಾವಧಿಗಾಗಿ ಮುಂದೂಡಲಾಗಿದೆ ಎಂದು ಮಸೀದಿ ಆಡಳಿತ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.
Next Story