ಜುಗಾರಿ ಆಡುತ್ತಿದ್ದ 12 ಮಂದಿಯ ಬಂಧನ
ಕಾಪು, ಎ.16: ಕಟಪಾಡಿ ಸಮೀಪದ ಕಲ್ಲಾಪು ಎಂಬಲ್ಲಿ ಎ.15ರಂದು ಸಂಜೆ ವೇಳೆ ಇಸ್ಪೀಟು ಜುಗಾರಿ ಆಡುತ್ತಿದ್ದ ರವಿ ಪೂಜಾರಿ(46), ಪ್ರಸನ್ನ(38), ಪುನಿತ್(29), ವರುಣ್(25) ಎಂಬವರನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.
ಉಳಿದಂತೆ ರೋಹಿತ್ ಹಾಗೂ ಪ್ರಭಾಕರ್ ಎಂಬವರು ಪೊಲೀಸ್ ದಾಳಿ ವೇಳೆ ಓಡಿ ಹೋಗಿದ್ದು, ಇವರಲ್ಲಿ ರೋಹಿತ್ ಓಡುವಾಗ ಬಿದ್ದು ಕೈ ಮೂಳೆ ಮುರಿದುಕೊಂಡಿವುದಾಗಿ ತಿಳಿದು ಬಂದಿದೆ. ಬಂಧಿತರಿಂದ 1660ರೂ. ನಗದು, ನಾಲ್ಕು ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಂಗೊಳ್ಳಿ: ಗುಜ್ಜಾಡಿ ಗ್ರಾಮದ ಬೆಣ್ಗೆರೆ ಎಂಬಲ್ಲಿನ ಬೀಚ್ನಲ್ಲಿ ಎ.15ರಂದು ಇಸ್ಪೀಟು ಜುಗಾರಿ ಆಡುತ್ತಿದ್ದ ವೆಂಕಟೇಶ ಖಾರ್ವಿ, ಕೃಷ್ಣ ಖಾರ್ವಿ, ನಾಗರಾಜ ಖಾರ್ವಿ, ನಾಗೇಶ ಖಾರ್ವಿ, ಅಣ್ಣಪ್ಪಮೊಗವೀರ ಎಂಬವರನ್ನು ಗಂಗೊಳ್ಳಿ ಪೊಲೀಸರು ಬಂಧಿಸಿ, ನಗದು ವಶಪಡಿಸಿಕೊಂಡಿದ್ದಾರೆ.
ಅಜೆಕಾರು: ಕುಕ್ಕುಜೆ ಗ್ರಾಮದ ಪಣೋಳಿ ಎಂಬಲ್ಲಿ ಎ.15ರಂದು ಕೋಳಿ ಅಂಕ ನಡೆಸುತ್ತಿದ್ದ ಕರುಣಾಕರ(35), ದೇವು ಪೂಜಾರಿ(48), ಸುಧೀರ್(25) ಎಂಬವರನ್ನು ಪೊಲೀಸರು ಬಂಧಿಸಿದ್ದು, ಇವರಿಂದ 2500ರೂ. ನಗದು ಹಾಗೂ 2 ಕೋಳಿ ಹಾಗೂ ಎರಡು ಸಣ್ಣ ಕತ್ತಿಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.