ನೆಲ್ಯಾಡಿ: ಎಸ್ಡಿಪಿಐ ಸಂಸ್ಥಾಪನಾ ದಿನಾಚರಣೆ
ಮಂಗಳೂರು, ಜೂ.21: ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಪಕ್ಷದ ಸಂಸ್ಥಾಪನಾ ದಿನಾಚರಣೆಯು ರವಿವಾರ ನೆಲ್ಯಾಡಿ ಪೇಟೆಯಲ್ಲಿ ಜರುಗಿತು.
ಈ ಸಂದರ್ಭ ದೇಶದ ಗಡಿಯಲ್ಲಿ ಹುತಾತ್ಮರಾಗಿರುವ ಯೋಧರಿಗೆ ಸಂತಾಪ ಸಲ್ಲಿಸಲಾಯಿತು. ಎಸ್ಡಿಪಿಐ ಕಡಬ ತಾಲೂಕು ಸಮಿತಿಯ ಸದಸ್ಯ ಸಾದಿಕ್ ಅತ್ತಾಜೆ, ಪ್ರಧಾನ ಕಾರ್ಯದರ್ಶಿ ರಫೀಕ್ ನೆಲ್ಯಾಡಿ ಮಾತನಾಡಿದರು.
ಪಿಎಫ್ಐ ನೆಲ್ಯಾಡಿ ಡಿವಿಜನ್ ಅಧ್ಯಕ್ಷ ಸಿದ್ದೀಕ್ ಎಂ, ಕೌಕ್ರಡಿ ಬ್ರಾಂಚ್ ಅಧ್ಯಕ್ಷ ಟಿಪ್ಪುಸುಲ್ತಾನ್, ಗೋಳಿತೊಟ್ಟು ಬ್ರಾಂಚ್ ಕಾರ್ಯದರ್ಶಿ ಸಾದಿಕ್ ಗೋಳಿತೊಟ್ಟು ಉಪಸ್ಥಿತರಿದ್ದರು.
ಸಿದ್ದೀಕ್ ನೆಲ್ಯಾಡಿ ಸ್ವಾಗತಿಸಿದರು, ರಿಝ್ವಾನ್ ಗೊಳಿತೊಟ್ಟು ಕಾರ್ಯಕ್ರಮ ನಿರೂಪಿಸಿದರು.
Next Story