ಕರಾವಳಿಯಲ್ಲಿ ಜುಲೈ 31ರಂದು ಈದುಲ್ ಅಝ್ ಹಾ ಆಚರಣೆ
ತ್ವಾಖಾ ಉಸ್ತಾದ್- ಬೇಕಲ ಉಸ್ತಾದ್
ಮಂಗಳೂರು, ಜು.21: ಪ್ರವಾದಿ ಇಬ್ರಾಹೀಂ (ಅ) ಮತ್ತು ಅವರ ಪುತ್ರ ಇಸ್ಮಾಯೀಲ್ (ಅ) ಅವರ ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಜು.31ರ ಶುಕ್ರವಾರ ಕರಾವಳಿಯಲ್ಲಿ ಆಚರಿಸಲಾಗುವುದು ಎಂದು ಖಾಝಿಗಳಾದ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಮತ್ತು ಅಲ್ಹಾಜ್ ಬೇಕಲ ಇಬ್ರಾಹೀಂ ಮುಸ್ಲಿಯಾರ್ ಪ್ರತ್ಯೇಕ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಮಂಗಳವಾರ ಅಸ್ತಮಿಸಿದ ಬುಧವಾರ ರಾತ್ರಿ ದುಲ್ಹಜ್ ಪ್ರಥಮ ಚಂದ್ರದರ್ಶನವಾಗಿದೆ. ಅದರಂತೆ ಜು. 31ರಂದು ಬಕ್ರೀದ್ ಆಚರಿಸಲು ನಿರ್ಧರಿಸಲಾಗಿದೆ.
Next Story