ಸರಯೂ ಮಹಿಳಾ ಯಕ್ಷ ಕಲಾ ವೃಂದದ ದಶಮಾನೋತ್ಸವ; ಸನ್ಮಾನ
ಮಂಗಳೂರು, ಸೆ.13: ಮಂಗಳೂರಿನ ಸರಯೂ ಮಹಿಳಾ ಯಕ್ಷ ಕಲಾ ವೃಂದ ಕೋಡಿಕಲ್ ಇದರ ದಶಮಾನೋತ್ಸವದ ಅಂಗವಾಗಿ ತುಳು ಸಾಹಿತ್ಯ ಅಕಾಡಮಿ ಸಹಕಾರದೊಂದಿಗೆ ಮಂಗಳೂರಿನ ತುಳು ಭವನದಲ್ಲಿ ಶನಿವಾರ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ಅಧ್ಯಕ್ಷ ಭಾಸ್ಕರ ಬಾರ್ಯ ಅವರನ್ನು ಸನ್ಮಾನಿಸಲಾಯಿತು.
ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ದಯಾನಂದ ಕತ್ತಲ್ಸಾರ್ ಅಧ್ಯಕ್ಷತೆ ವಹಿಸಿದ್ದರು. ವಸಂತ ಕುಮಾರ್ ಪೆರ್ಲ , ಸುಧಾಕರ್ ರಾವ್ ಪೇಜಾವರ ಉಪಸ್ಥಿತರಿದ್ದರು.
ಕಲಾವೃಂದದ ಸಂಚಾಲಕ ರವಿ ಅಲೆವೂರಾಯ ಸ್ವಾಗತಿಸಿ, ವಂದಿಸಿದರು.
Next Story