ಅಕ್ರಮ ಸಾಗಾಟದ ಅಕ್ಕಿ ವಶ
ಕುಂದಾಪುರ, ಸೆ.15: ವಾಹನದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಅನ್ನಭಾಗ್ಯದ ಅಕ್ಕಿಯನ್ನು ಕುಂದಾಪುರ ಆಹಾರ ನಿರೀಕ್ಷಕರ ನೇತೃತ್ವದ ತಂಡ ಸೆ.14ರಂದು ಖಾರ್ವಿಕೇರಿ ರಿಂಗ್ ರಸ್ತೆಯಲ್ಲಿ ವಶಪಡಿಸಿಕೊಂಡಿದೆ.
ಆರೋಪಿ ಟಾಟಾ ಏಸ್ ವಾಹನದ ಚಾಲಕ ಕೃಷ್ಣ ಖಾರ್ವಿ ಖಾರ್ವಿಕೇರಿ ಪರಾರಿಯಾಗಿದ್ದು, ಅಧಿಕಾರಿಗಳು ವಾಹನ ಹಾಗೂ ಅದರಲ್ಲಿದ್ದ ಅಕ್ಕಿ ತುಂಬಿದ 8 ಚೀಲಗಳಲ್ಲಿದ್ದ ಒಟ್ಟು 300 ಕಿಲೋ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story