ಮುಡಿಪು : ಚರಂಡಿ ವ್ಯವಸ್ಥೆ ಕಲ್ಪಿಸುವಂತೆ ಡಿವೈಎಫ್ಐನಿಂದ ಗ್ರಾಪಂಗೆ ಮನವಿ
ಮುಡಿಪು : ಬಾಳೆಪುಣಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಕುಕ್ಕುದಕಟ್ಟೆ ಸೈಟ್ 3ನೇ ವಾರ್ಡ್ ನಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೇ ಇರುವ ಕಾರಣ ಮಳೆ ನೀರು ತುಂಬಿ ರಸ್ತೆಯಲ್ಲಿ ಜನ ಓಡಾಡುವುದು ಕಷ್ಟವಾಗಿದೆ ಎಂದು ಡಿವೈಎಫ್ಐ ನಿಯೋಗ ಬಾಳೆಪುಣಿ ಗ್ರಾಮ ಪಂಚಾಯತ್ ಅಧಿಕಾರಿಗಳನ್ನು ಭೇಟಿ ಮಾಡಿ ಚರಂಡಿ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿತು.
ನಿಯೋಗದ ಮುಖಂಡರು ಈ ಸಂದರ್ಭ ಮಾತನಾಡಿ, ಇಲ್ಲಿ ಕೆಂಪು ಕಲ್ಲು ತೆಗೆಯಲು ಗುಂಡಿ ತೋಡಿದವರು ಅದನ್ನು ಹಾಗೆಯೇ ಬಿಟ್ಟಿದ್ದು ಅಲ್ಲೂ ನೀರು ತುಂಬಿ ಅಕ್ಕಪಕ್ಕದ ಮನೆಗಳಿಗೆ ತೊಂದರೆಯಾಗುತ್ತಿದೆ ಎಂದು ವಿವರಿಸಿದರು.
ನಿಯೋಗದಲ್ಲಿ ಡಿವೈಎಫ್ಐ ಮುಡಿಪು ಘಟಕದ ಅಧ್ಯಕ್ಷ ರಝಾಕ್ ಮುಡಿಪು, ಕಾರ್ಯದರ್ಶಿ ರಿಯಾಝ್ ಮುಡಿಪು, ಕೋಶಾಧಿಕಾರಿ ಅಖ್ತರ್ ಮುಡಿಪು, ಮುಖಂಡ ಶಾಫಿ ಮುಡಿಪು, ನಿಝಾರ್ ಮುಡಿಪು ಉಪಸ್ಥಿತರಿದ್ದರು.