ಕೆಪಿಸಿಸಿ ವಕ್ತಾರರಾಗಿ ಐವನ್ ಡಿ'ಸೋಜಾ ನೇಮಕ
ಮಂಗಳೂರು : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವಕ್ತಾರರಾಗಿ ವಿಧಾನ ಪರಿಷತ್ತಿನ ಮಾಜಿ ಮುಖ್ಯ ಸಚೇತಕರಾದ ಐವನ್ ಡಿ'ಸೋಜಾ ಅವರನ್ನು ನೇಮಕಗೊಳಿಸಿ ಕೆಪಿಸಿಸಿ.ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಆದೇಶವನ್ನು ಹೊರಡಿಸಿದ್ದಾರೆ.
ಐವನ್ ಡಿ'ಸೋಜಾರವರು ಇದು ನಾಲ್ಕನೇಯ ಬಾರಿಗೆ ಕೆ.ಪಿ.ಸಿ.ಸಿ.ವಕ್ತಾರರಾಗಿ ನೇಮಕಗೊಳ್ಳುತ್ತಿದ್ದಾರೆ. ರಾಜ್ಯ ವಿಧಾನ ಮಂಡಲ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಉಭಯ ಸದನಗಳ ಕಾಂಗ್ರೆಸ್ ಶಾಸಕರುಗಳಿಗೆ ಅಧಿವೇಶನದಲ್ಲಿ ಚರ್ಚಿಸಬೇಕಾದ ವಿಚಾರಗಳು ಹಾಗೂ ಸರ್ಕಾರಕ್ಕೆ ಕೇಳಬೇಕಾದ ಪ್ರಶ್ನೆಗಳ ಕುರಿತಾಗಿ ಮಾಹಿತಿಯನ್ನು ನೀಡುವ ಜವಬ್ದಾರಿಯನ್ನು ಕೂಡ ಕೆ.ಪಿ.ಸಿ.ಸಿ.ಯಿಂದ ಐವನ್ ಡಿ'ಸೋಜಾರವರಿಗೆ ವಹಿಸಲಾಗಿದೆ.
Next Story