ಕೊಣಾಜೆ: ಬೇಕಲ್ ಉಸ್ತಾದ್ ಹೆಸರಿನಲ್ಲಿ ದುವಾ, ಮೌಲಿದ್ ಪಾರಾಯಣ ಕಾರ್ಯಕ್ರಮ
ಕೊಣಾಜೆ : ಇತ್ತೀಚೆಗೆ ನಿಧನರಾದ ಉಡುಪಿ, ಚಿಕ್ಕಮಗಳೂರು ,ಹಾಸನ ಖಾಝಿ, ಕೇಂದ್ರ ಸಮಸ್ತ ಮುಶಾವರ ಸದಸ್ಯ ,ಕರ್ನಾಟಕ ಜಂಯತುಲ್ ಉಲಮಾ ಅಧ್ಯಕ್ಷ, ಜಾಮಿಯ ಸ ಅದಿಯಾ ಕಾಲೇಜಿನ ಪ್ರಾಂಶುಪಾಲರಾಗಿದ್ದ ತಾಜುಲ್ ಫುಕಾಹ್ ಬೇಕಲ ಉಸ್ತಾದ್ ಅವರ ಹೆಸರಿನಲ್ಲಿ ದುವಾ ಹಾಗೂ ಮೌಲಿದ್ ಪಾರಾಯಣ, ಸಾಮೂಹಿಕ ದ್ಸಿಕ್ರ್ ಮಜ್ಲಿಸ್ ಮರಿಕ್ಕಳ ಜುಮಾ ಮಸೀದಿ ಯಲ್ಲಿ ಶನಿ ವಾರ ನಡೆಯಿತು.
ಅಬ್ದುಲ್ ಹಮೀದ್ ಮುಸ್ಲಿಯಾರ್ ದುವಾ ಹಾಗೂ ಮೌಲಿದ್ ಪಾರಾಯಣ ದ ನೇತೃತ್ವ ವಹಿಸಿದ್ದರು.
ಸಮಾರೋಪ ದುವಾ ನೆರವೇರಿಸಿದ ಅಶ್ರಫ್ ತಂಙಳ್ ಆದೂರು ಮಾತನಾಡಿ ಬೇಕಲ ಉಸ್ತಾದ್ ರವರು ಧರ್ಮ ಕ್ಕಾಗಿ ಮಹತ್ತರ ಸಾಧನೆ ಮಾಡಿದವರು.ಸಮಾಜಕ್ಕೆ ದೊಡ್ಡ ಕೊಡುಗೆ ಅವರದ್ದಿದೆ. ಅವರ ಅಗಲಿಕೆ ಯಿಂದ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ.ನಾನು ಕೂಡಾ ಅವರ ಶಿಷ್ಯನಾಗಿದ್ದೇನೆ.ಇನ್ನು ಅವರ ನೆನಪು ಮಾತ್ರ ಇಟ್ಟು ಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ತಂಙಳ್ ಕುಂಬೊಳ್, ಜಾಫರ್ ಸಾದೀಕ್ ತಂಙಳ್, ಮಾಣಿಕೋತ್, ನಾಸೀರ್ ತಂಙಳ್ ಉದ್ಯಾವರ, ಅಬ್ದುಲ್ ರಹಿಮಾನ್ ಮದನಿ ಜೆಪ್ಪು,ಕೆಕೆಎಂ ಕಾಮಿಲ್ ಸಖಾಫಿ, ಖಾದರ್ ಸಖಾಫಿ ಅಲ್ ಮದೀನಾ, ಅಬ್ದುಲ್ ಹಮೀದ್ ಮದನಿ ಪಡಿಕಲ್, ಮುಹಮ್ಮದ್ ಸಖಾಫಿ ಪಾತೂರು, ಮೋಯ್ಯದ್ದೀನ್ ಸಖಾಫಿ, ಮೊಯ್ಯದ್ದೀನ್ ಸಅದಿ ತೋಟಾಲ್, ನಾಸಿರುದ್ದೀನ್ ಮದನಿ, ವೊಳವೂರು ಸಅದಿ, ದಾರುಲ್ ಅಶ್ ಅರಿಯ ಅಧ್ಯಕ್ಷ ಮಹಮ್ಮದ್ ಅಲಿ ಸಖಾಫಿ, ಬೇಕಲ್ ಉಸ್ತಾದ್ ಅವರ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಅಬ್ದುಲ್ ಜಲೀಲ್ ಸಖಾಫಿ ಜಾಲ್ಸೂರು, ಕಾರ್ಯದರ್ಶಿ ಇಸ್ಮಾಯಿಲ್ ಸ ಅದಿ ಉರುಮಣೆ, ಅಬ್ಬಾಸ್ ಸಖಾಫಿ ಮಡಿಕೇರಿ ಮೊದಲಾದವರು ಉಪಸ್ಥಿತರಿದ್ದರು.