ಉದ್ಯಾವರ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಮಿತೇಶ್ ಸುವರ್ಣ ಆಯ್ಕೆ
ಉದ್ಯಾವರ, ಸೆ.26: ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಉದ್ಯಾವರ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಯುವ ಮುಖಂ ಮಿತೇಶ್ ಸುವರ್ಣ ಆಯ್ಕೆಯಾಗಿದ್ದಾರೆ.
ಮಿತೇಶ್ ಸುವರ್ಣ ನಿಕಟ ಪೂರ್ವ ಗ್ರಾಪಂ ಸದಸ್ಯರಾಗಿದ್ದು, ಹಲವಾರು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಉದ್ಯಾವರ ಗ್ರಾಮೀಣ ಕಾಂಗ್ರೆಸ್ನ ಶಿಫಾರಸಿನ ಮೇರೆಗೆ ಯುವ ಕಾಂಗ್ರೆಸ್ ಉಪಾಧ್ಯಕ್ಷ ಚರಣ್ ವಿಠಲ್ ಸಮ್ಮುಖ ದಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಭೆಯಲ್ಲಿ ಮಿತೇಶ್ ಸುವರ್ಣ ಆಯ್ಕೆಯನ್ನು ಘೋಷಿಸಿದರು
Next Story