ಮಣಿಪಾಲ: ಸೆ.29ರಂದು ಎಸ್ಪಿಬಿಗೆ ಗಾನ ನಮನ
ಉಡುಪಿ, ಸೆ. 28: ಮಣಿಪಾಲ ರೋಟರಿ ಹಿಲ್ಸ್ ಹಾಗೂ ಮಣಿಪಾಲ ಕರೋಕೆ ತಂಡದ ಸದಸ್ಯರಿಂದ ಇತ್ತೀಚೆಗೆ ನಿಧನರಾದ ದಕ್ಷಿಣ ಭಾರತದ ಖ್ಯಾತ ಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಸುಮಧುರ ಹಾಡುಗಳ ಮೂಲಕ ‘ಗಾನಗಂಧರ್ವರಿಗೆ ಗಾನ ನಮನ’ ಕಾರ್ಯಕ್ರಮ, ಸೆ.29ರ ಮಂಗಳವಾರ ಸಂಜೆ 5:30ಕ್ಕೆ ಮಣಿಪಾಲದ ಮಣ್ಣಪಳ್ಳದಲ್ಲಿರುವ ರೋಟರಿ ಭವನದಲ್ಲಿ ಜರಗಲಿದೆ ಎಂದು ಮಣಿಪಾಲ ಕರೋಕೆ ತಂಡದ ಗಾಯಕರೂ, ಕಾರ್ಯಕ್ರಮದ ಸಂಚಾಲಕರೂ ಆದ ಉಮೇಶ್ ಮಣಿಪಾಲ ತಿಳಿಸಿದ್ದಾರೆ.
Next Story