ಬ್ರಾಹ್ಮಣರ ಸರ್ವಾಧಿಕಾರ ನಾಶವಾಗದೆ ಅಸ್ಪಶ್ಯತೆ ಕೊನೆಯಾಗಲ್ಲ: ಸುಂದರ್ ಕಪ್ಪೆಟ್ಟು
ಉಡುಪಿ, ಸೆ.29: ದಲಿತರಅಸ್ಪಶ್ಯತೆಯು ನಾಶವಾಗಬೇಕಾದರೆ, ಬ್ರಾಹ್ಮಣರ ಸರ್ವಾಧಿಕಾರ ನಾಶವಾಗಬೇಕು. ಆದರೆ ಈ ಜಾತಿಗಳು ರಾಜಕೀಯ ಸರ್ವಾಧಿ ಕಾರವನ್ನು ಹೊಂದಿರುವ ತನಕ ದಲಿತರು ಅಸ್ಪಶ್ಯತೆಯೆಂಬ ಗುಲಾಮಗಿರಿಯಲ್ಲಿ ನರಳುತ್ತಲೇ ಇರಬೇಕಾಗುತ್ತದೆ ಎಂದು ಹಿರಿಯ ದಲಿತ ನಾಯಕ ಸುಂದರ್ ಕಪ್ಪೆಟ್ಟು ಹೇಳಿದ್ದಾರೆ.
ಹಿರಿಯಡ್ಕ ಸಮೀಪದ ಅಂಜಾರುವಿನ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ರವಿವಾರ ನಡೆದ ಅಂಬೇಡ್ಕರ್ ಯುವಸೇನೆ ರಚನಾ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡುತಿದ್ದರು.
ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಯುವ ಸೇನೆಯನ್ನು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಅಂಬೇಡ್ಕರ್ ಯುವಸೇನೆಯ ಅಧ್ಯಕ್ಷ ಹರೀಶ್ ಸಲ್ಯಾನ್ ವಹಿಸಿದ್ದರು. ದಲಿತ ಮುಖಂಡರಾದ ಮಂಜುನಾಥ ಕಪ್ಪೆಟ್ಟು, ಗುಣವಂತ ತೊಟ್ಟಂ, ಭಗವಾನ್ ನೆರ್ಗಿ, ಸುಮಿತ್ ಮಲ್ಪೆ, ಸಂತೋಷ್ ಕಪ್ಪೆಟ್ಟು, ಸತೀಶ್ ಕಪ್ಪಟ್ಟು, ಶ್ರೀನಿವಾಸ ಓಂತಿಬೆಟ್ಟು, ಸುರೇಂದ್ರ ಅಂಜಾರು, ಸುಧಾಕರ ಅಂಜಾರು, ಶೇಖರ್ ಅಂಜಾರು, ಚಂದ್ರಕಾಂತ್ ಅಂಜಾರು, ರಾಮಚಂದ್ರ ಉಪಸ್ಥಿತರಿದ್ದರು.
ಶಿವಾನಂದ ಅಂಜಾರು ಸ್ವಾಗತಿಸಿದರು. ಶ್ರೀಧರ್ ಮೂಡು ಅಂಜಾರು ವಂದಿಸಿದರು. ವರುಣ ಅಂಜಾರು ಕಾರ್ಯಕ್ರಮ ನಿರೂಪಿಸಿದರು.