ವಿಷ ಸೇವಿಸಿ ವೃದ್ಧೆ ಮೃತ್ಯು
ಶಂಕರನಾರಾಯಣ, ಸೆ.30: ಆಜ್ರಿ ಗ್ರಾಮದ ಹೊಸ್ಮಕ್ಕಿ ಯಡೂರು ಎಂಬಲ್ಲಿ ಅಡಿಕೆ ತೋಟದ ಕೊಳೆ ರೋಗಕ್ಕೆ ಸಿಂಪಡಿಸುವ ಮದ್ದನ್ನು ಸೇವಿಸಿ ವೃದ್ಧರೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಯಡೂರಿನ ಅಕ್ಕಮ್ಮ ಶೆಡ್ತಿ(80) ಎಂದು ಗುರುತಿಸಲಾಗಿದೆ. ಸೆ.28 ರಂದು ಮದ್ದು ಸೇವಿಸಿ ಅಸ್ವಸ್ಥಗೊಂಡಿದ್ದ ಇವರು, ಸೆ.29ರಂದು ಅಪರಾಹ್ನ ಚಿಕಿತ್ಸೆ ಫಲಕಾರಿಯಾಗದೆ ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟರು.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story