ಅಕ್ರಮ ಗಾಂಜಾ, ಮದ್ಯ ದಾಸ್ತಾನು: ಓರ್ವ ಸೆರೆ
ಉಡುಪಿ, ಅ.1: ಅಕ್ರಮವಾಗಿ ಗಾಂಜಾ ಹಾಗೂ ಮದ್ಯ ದಾಸ್ತಾನು ಇರಿಸಿದ್ದ ಪುತ್ತೂರು ಗ್ರಾಮದ ವಾಸುಕಿ ನಗರದ ಮನೆಗೆ ಅ.1ರಂದು ಬೆಳಗ್ಗೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳ ತಂಡ, ಓರ್ವನನ್ನು ಬಂಧಿಸಿದ್ದಾರೆ.
ಸಂತೆಕಟ್ಟೆಯ ಗಣೇಶ್ ನಾಯಕ್ ಬಂಧಿತ ಆರೋಪಿ. ಈತನಿಂದ 150 ಗ್ರಾಂ ಗಾಂಜಾ ಮತ್ತು ಗೋವಾ ರಾಜ್ಯದ 12 ಲೀಟರ್ ವಿಸ್ಕಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರ ಮಾರ್ಗದರ್ಶನ ದಂತೆ ಜಿಲ್ಲಾ ಅಧಿಕಾರಿ ನಿರ್ದೇಶನದಲ್ಲಿ ಅಬಕಾರಿ ಉಪ ಅಧೀಕ್ಷಕರು ಹಾಗೂ ಅಬಕಾರಿ ನಿರೀಕ್ಷಕರು ಮತ್ತು ಸಿಬ್ಬಂದಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ. ಈ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
Next Story