ಹಾವು ಕಡಿತದಿಂದ ವ್ಯಕ್ತಿ ಮೃತ್ಯು
ಹಿರಿಯಡ್ಕ, ಅ.11: ವಿಷದ ಹಾವು ಕಡಿತಕ್ಕೆ ಒಳಗಾದ ಪರಿಣಾಮ ವ್ಯಕ್ತಿ ಯೊಬ್ಬರು ಮೃತಪಟ್ಟ ಘಟನೆ ಅ.10ರಂದು ರಾತ್ರಿ 8.30ರ ಸುಮಾರಿಗೆ ನಡೆದಿದೆ.
ಮೃತರನ್ನು ಬೊಮ್ಮರಬೆಟ್ಟು ಗ್ರಾಮದ ಬಸ್ತಿ ನಿವಾಸಿ ಬಾಬು ಶೆಟ್ಟಿಗಾರ್(62) ಎಂದು ಗುರುತಿಸಲಾಗಿದೆ. ಇವರು ರಾತ್ರಿ ಮನೆಯ ಹಿಂಬದಿಯಿಂದ ಬಾತ್ ರೂಮ್ಗೆ ಹೋಗಿ ಸ್ನಾನ ಮಾಡಿ, ಅಂಗಳಕ್ಕೆ ಬಂದಾಗ ವಿಷಪೂರಿತ ಹಾವು ಕಾಲಿಗೆ ಕಚ್ಚಿತ್ತೆನ್ನಲಾಗಿದೆ. ಇದರಿಂದ ಅಸ್ವಸ್ಥಗೊಂಡ ಅವರು, ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತ ಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story