ದಿ ಮೆಸೆಂಜರ್ ಪೋಸ್ಟರ್ ಬಿಡುಗಡೆಗೊಳಿಸಿದ ಝೈನುಲ್ ಉಲಮಾ ಮಾಣಿ ಉಸ್ತಾದ್
ಮಂಗಳೂರು : ಪ್ರವಾದಿ ಜನ್ಮ ಮಾಸಾಚರಣೆಯ ಅಂಗವಾಗಿ 'ಕರ್ನಾಟಕ ಮುಸ್ಲಿಂ ಜಮಾಅತ್' ರಾಜ್ಯಾದ್ಯಂತ ನಾಲ್ಕು ಸಾಪ್ತಾಹಿಕ ಕಾರ್ಯಕ್ರಮಗಳನ್ನು ಪ್ರಕಟಿಸಿದೆ.
'ದಿ ಮೆಸೆಂಜರ್' ಎಂಬ ಮುಖ್ಯ ಘೋಷಣೆಯೊಂದಿಗೆ 'ಪ್ರವಾದಿಯ ಆರೋಗ್ಯ ದರ್ಶನ', 'ಕೌಟುಂಭಿಕ ಸಂಬಂಧ', 'ಸಾಮಾಜಿಕ ಬದಲಾವಣೆ' ಮತ್ತು 'ಶಾಂತಿದೂತ' ಎಂಬ ವಿಷಯಗಳಲ್ಲಿ ನಾಲ್ಕು ಸಾಪ್ತಾಹಿಕ ಕಾರ್ಯಕ್ರಮಗಳನ್ನು ಬ್ಲಾಕ್, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಸಂಘಟಿಸಲಾಗುವುದು ಎಂದು ಮುಸ್ಲಿಂ ಜಮಾಅತ್ ಪ್ರ. ಕಾರ್ಯದರ್ಶಿ ಶಾಫಿ ಸಅದಿ ತಿಳಿಸಿದ್ದಾರೆ.
ಈ ಬಗ್ಗೆ ಇಂದು ಚಿಕ್ಕಮಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ 'ದಿ ಮೆಸೆಂಜರ್' ಪೋಸ್ಟರ್ ಬಿಡುಗಡೆಗೊಳಿಸಲಾಯಿತು. ಪೋಸ್ಟರ್ ಬಿಡುಗಡೆಗೊಳಿಸಿದ ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲಾ ಸಂಯುಕ್ತ ಖಾಝಿ ಮಾಣಿ ಉಸ್ತಾದ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಸ್ಲಿಂ ಜಮಾಅತ್ ನಾಯಕರಾದ ಅಬೂಸುಫಿಯಾನ್ ಮದನಿ, ಅಬೂಬಕ್ಕರ್ ಹಾಜಿ ಉಡುಪಿ, ಅಬ್ದುರ್ರಹ್ಮಾನ್ ರಝ್ವಿ, ಚಿಕ್ಕ ಮಗಳೂರು ಜಿಲ್ಲಾ ಮುಸ್ಲಿಂ ಜಮಾಅತ್ ಅಧ್ಯಕ್ಷ ಮುಹಮ್ಮದ್ ಶಾಹಿದ್ ರಝ್ವಿ, ಚಿಕ್ಕಮಗಳೂರು ಜಿಲ್ಲಾ ನಾಯಕರಾದ ಯೂಸುಫ್ ಹಾಜಿ ಉಪ್ಪಳ್ಳಿ, ಮೌಲಾನಾ ಝಬೀವುಲ್ಲಾ ರಝ್ವಿ, ನಾಸಿರ್ ಬಾಳೆಹೊನ್ನೂರು ಮುಂತಾದವರು ಉಪಸ್ಥಿತರಿದ್ದರು.