ಕಾರಿನಲ್ಲಿ ಬಂದ ತಂಡದಿಂದ ಯುವಕನ ಮೇಲೆ ಹಲ್ಲೆ: ದೂರು
ಶಂಕರನಾರಾಯಣ, ಅ.15: ಕಾರಿನಲ್ಲಿ ಬೆನ್ನಟ್ಟಿಕೊಂಡು ಬಂದ ಮೂವರ ಗುಂಪೊಂದು ಹೊಸಂಗಡಿ ಗ್ರಾಮದ ಹೊಸಗದ್ದೆ ಮನೆಯ ಗೋಪಾಲ ಗೊಲ್ಲ (38) ಎಂಬ ಯುವಕನ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿರುವ ಘಟನೆ ಅ.13ರಂದು ರಾತ್ರಿ 9:30ರ ಸುಮಾರಿಗೆ ಸಿದ್ಧಾಪುರ ಗ್ರಾಮದ ಜನ್ಸಾಲೆ ಎಂಬಲ್ಲಿ ಸಾರ್ವಜನಿಕ ರಸ್ತೆಯಲ್ಲಿ ನಡೆದಿದೆ.
ಆರೋಪಿ ಪ್ರಶಾಂತ ಶೆಟ್ಟಿ ಎಂಬಾತ ಇತರ ಮೂವರೊಂದಿಗೆ ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದು ಜನ್ಸಾಲೆಯ ಜಯರಾಮ ಭಂಡಾರಿಯವರ ಮನೆ ಎದುರು ಒಮ್ನಿ ಕಾರಿನಲ್ಲಿದ್ದ ಗೋಪಾಲ ಗೊಲ್ಲರನ್ನು ತಡೆದು ನಿಲ್ಲಿಸಿ ಸ್ಟೀಲ್ ರಾಡ್ನಿಂದ ಹಲ್ಲೆ ನಡೆಸಿ, ಬೈಯ್ದು ಜೀವ ಬೆದರಿಕೆ ಒಡ್ಡಿದ್ದಾ ರೆಂದು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ ದೂರಿನಲ್ಲಿ ಗೊಲ್ಲ ತಿಳಿಸಿದ್ದಾರೆ.
Next Story