ಕಾಸರಗೋಡು : ಕೊಲೆಯತ್ನ ಪ್ರಕರಣ; ಆರೋಪಿಗೆ ಐದು ವರ್ಷ ಸಜೆ, ದಂಡ
ಕಾಸರಗೋಡು : ನ್ಯಾಯಾಲಯ ಪರಿಸರದಲ್ಲಿ ಕೊಲೆ ಪ್ರಕರಣದ ಆರೋಪಿಯನ್ನು ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗೆ ಕಾಸರಗೋಡು ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ 5 ವರ್ಷ ಕಠಿಣ ಸಜೆ ಹಾಗೂ 10 ಸಾವಿರ ರೂ . ದಂಡ ವಿಧಿಸಿ ತೀರ್ಫು ನೀಡಿದೆ.
ಉಪ್ಪಳ ಹೀರೊ ಸ್ಟ್ರೀಟ್ ನ ಮುಹಮ್ಮದ್ ಅಲಿ ಯಾನೆ ಕಸಾಯಿ ಅಲಿ ( 39) ಶಿಕ್ಷೆಗೊಳಗಾದವನು. ದಂಡ ಪಾವತಿಸದಿದ್ದಲ್ಲಿ ಒಂದು ತಿಂಗಳು ಹೆಚ್ಚು ಶಿಕ್ಷೆ ಅನುಭವಿಸಬೇಕು.
ಉಪ್ಪಳದ ಮುತ್ತಲಿಬ್ ಕೊಲೆ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಮುಹಮ್ಮದ್ ರಫೀಕ್ ನನ್ನು ಕೊಲೆ ಗೆ ಯತ್ನಿಸಿದ ಪ್ರಕರಣದ ಆರೋಪಿಯಾಗಿದ್ದಾನೆ.
2013ರ ಡಿಸಂಬರ್ 16 ರಂದು ವಿದ್ಯಾನಗರದಲ್ಲಿರುವ ನ್ಯಾಯಾಲಯ ಸಮುಚ್ಚಯ ಪರಿಸರದಲ್ಲಿ ಘಟನೆ ನಡೆದಿತ್ತು. ಕೊಲೆ ಪ್ರಕರಣದ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ಜೈಲಿಗೆ ಕರೆದೊಯ್ಯುತ್ತಿದ್ದಾಗ ಚಾಕು ವಿನಿಂದ ಇರಿದು ಕೊಲೆ ಗೆ ಯತ್ನಿಸಿದ್ದು, ಗಂಭೀರ ಗಾಯಗೊಂಡ ರಫೀಕ್ ನನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮುತ್ತಲಿಬ್ ಕೊಲೆಗೆ ಪ್ರತಿಕಾರವಾಗಿ ರಫೀಕ್ ಕೊಲೆಗೆ ಯತ್ನಿಸಿದ್ದಾಗಿ ಎಂದು ತನಿಖೆಯಿಂದ ತಿಳಿದು ಬಂದಿತ್ತು.