ಪಾವೂರು: ವರಂತೋಟ-ಕಲ್ಲಾಜೆ ರಸ್ತೆ ಉದ್ಘಾಟನೆ
ಕೊಣಾಜೆ, ಅ.18: ಪಾವೂರು ಗ್ರಾಮದ ಆರನೇ ವಾರ್ಡ್ನ ಇನೋಳಿ ವರಂತೋಟ-ಕಲ್ಲಾಜೆ ಕಾಂಕ್ರಿಟ್ ರಸ್ತೆಯನ್ನು ರವಿವಾರ ಸ್ಥಳೀಯರಾದ ತುಕ್ರ ಪೂಜಾರಿ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು ಪಾವೂರು ಗ್ರಾಮದ ಬಹುತೇಕ ಒಳರಸ್ತೆಗಳು ಅಭಿವೃದ್ಧಿ ಯಾಗಿದ್ದು, ಹೊಸ ರಸ್ತೆಗಳ ನಿರ್ಮಾಣವೂ ಆಗಿದೆ. ವರಂತೋಟದಿಂದ ಕಲ್ಲಾಜೆ ಸಂಪರ್ಕಿಸಲು ಶಾಸಕರ 9 ಲಕ್ಷ ರೂ. ಅನುದಾನದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಿಸಲಾಗಿದೆ. ಇದರಿಂದಾಗಿ ಸ್ಥಳೀಯ ನಿವಾಸಿಗರು. ಅದರಲ್ಲೂ ಕೃಷಿಕರಿಗೆ ಹೆಚ್ಚಿನ ಉಪಯೋಗ ಆಗಲಿದೆ ಎಂದರು
ಪಾವೂರು ಗ್ರಾಪಂ ಮಾಜಿ ಅಧ್ಯಕ್ಷ ಫಿರೋಝ್ ಮಲಾರ್, ಜಾನ್ಸನ್, ವೀಣಾ, ಕಬೀರ್ ವರಂತೋಟ, ಹಮೀದ್, ನಾಸೀರ್, ವೇದಾನಂದ ಪೂಜಾರಿ ಉಪಸ್ಥಿತರಿದ್ದರು.
Next Story