ಮರಾಠಿ ಸಮಾಜ ಸೇವಾ ಸಂಘ ನೆರವು
ಗುರುಪುರ, ಅ.18: ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಎಡಪದವಿನ ಕೊಂದೋಡಿ ನಿವಾಸಿ ಮಲ್ಲಿಕಾ ನಾಯ್ಕಿ ಅವರ ವೈದ್ಯಕೀಯ ನೆರವಿಗೆ ಗಂಜಿಮಠದ ಮರಾಠಿ ಸಮಾಜ ಸೇವಾ ಸಂಘ(ರಿ) 20,000 ರೂ. ನೆರವು ನೀಡಿತು.
ಅನಾರೋಗ್ಯ ಪೀಡಿತಳ ಮನೆಗೆ ಭೇಟಿ ನೀಡಿ ನೆರವಿನ ಚೆಕ್ ವಿತರಿಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಸಂಘದ ಉಪಾಧ್ಯಕ್ಷ, ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶೇಖರ ಕಡ್ತಲ, ಕೆಲವು ವರ್ಷಗಳಿಂದ ಸಂಕಷ್ಟಕ್ಕೊಳಗಾದ ಸಮಾಜ ಬಾಂಧವರಿಗೆ ವಿವಿಧ ರೀತಿಯಲ್ಲಿ ನೆರವು ನೀಡುತ್ತ ಬಂದಿ ದ್ದೇವೆ. ಸಮಾಜದ ಜನರ ಕಷ್ಟ-ಸಮಸ್ಯೆಗಳಿಗೆ ಸ್ಪಂದಿಸಿ, ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದೇವೆ ಎಂದರು.
ಈ ಸಂದರ್ಭ ಸಂಘದ ಕಾರ್ಯದರ್ಶಿ ಅಶೋಕ್ ನಾಯ್ಕ, ಕೋಶಾಧಿಕಾರಿ ಕೇಶವ ನಾಯ್ಕ, ಜೊತೆ ಕಾರ್ಯದರ್ಶಿ ಹರಿಶ್ಚಂದ್ರ ನಾಯ್ಕ, ಸಂಘಟನಾ ಕಾರ್ಯದರ್ಶಿ ಸತೀಶ್ ನಾಯ್ಕ, ಪುರಂದರ ನಾಯ್ಕ, ನಾರಾಯಣ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.
Next Story