ಸಾಲಬಾಧೆ : ಕಟ್ಟಡ ಗುತ್ತಿಗೆದಾರ ಆತ್ಮಹತ್ಯೆ
ಕೋಟ, ಅ.23: ವ್ಯವಹಾರಕ್ಕಾಗಿ ಮಾಡಿರುವ ಸಾಲವನ್ನು ತೀರಿಸಲಾದೆ ಕಟ್ಟಡ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡ ಘಟನೆ ಅ.22ರಂದು ಸಂಜೆ ವೇಳೆ ನಡೆದಿದೆ.
ಮೃತರನ್ನು ಸಾಸ್ತಾನ ಪಾಂಡೇಶ್ವರ ನಿವಾಸಿ ಕೆ.ಅಬ್ಬಾಸ್ (53) ಎಂದು ಗುರುತಿಸಲಾಗಿದೆ. ಇವರು ವ್ಯವಹಾರಕ್ಕಾಗಿ ಮಾಡಿರುವ ಸಾಲವನ್ನು ತೀರಿಸಲಾಗದೆ ಮಾನಸಿಕವಾಗಿ ನೊಂದು ಪಾಂಡೇಶ್ವರ ಶಾಲೆಯ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Next Story