ದ.ಕ. ಜಿಲ್ಲಾ ಎಸ್ವೈಎಸ್ ವಾರ್ಷಿಕ ಕೌನ್ಸಿಲ್ ಸಭೆ
ಮಂಗಳೂರು, ಅ.24: ದ.ಕ.ಜಿಲ್ಲಾ ಎಸ್ವೈಎಸ್ (ವೆಸ್ಟ್) ಇದರ ವಾರ್ಷಿಕ ಕೌನ್ಸಿಲ್ (ಕೌಂಟ್-20) ಸಭೆಯು ಸುರಿಬೈಲ್ನ ದಾರುಲ್ ಅಶ್ಅರಿಯದಲ್ಲಿ ನಡೆಯಿತು.
ಜಿಲ್ಲಾಧ್ಯಕ್ಷ ಸಿಎಚ್ ಮಹಮ್ಮದ್ ಅಲಿ ಸಖಾಫಿ ಅಧ್ಯಕ್ಷತೆ ವಹಿಸಿದ್ದರು. ಎಸ್ವೈಎಸ್ ರಾಜ್ಯಾಧ್ಯಕ್ಷ ಪಿಎಂ ಉಸ್ಮಾನ್ ಸಅದಿ ಪಟ್ಟೋರಿ ಉದ್ಘಾಟಿಸಿದರು. ಪ್ರತಿ ಬ್ರಾಂಚ್ಗಳಲ್ಲಿ ರಬಿವುಲ್ ಅವ್ವಲ್ ತಿಂಗಳು ನಡೆಸಬೇಕಾದ ಮೌಲಿದ್ ಮಜ್ಲಿಸ್ ಕ್ಯಾಂಪನ್ನು ಉದ್ಘಾಟಿಸಲಾಯಿತು.
ಸೈಯದ್ ಅಲವಿ ತಂಙಳ್ ಕಿನ್ಯ ದುಆಗೈದರು. ಮೂಸ ಸಖಾಫಿ ಕಳತ್ತೂರು ಮುಖ್ಯ ಭಾಷಣ ಮಾಡಿದರು. ಅತಿಥಿಗಳಾಗಿ ಎಸ್ವೈಎಸ್ ರಾಜ್ಯ ನಾಯಕರಾದ ಅಶ್ರಫ್ ಕಿನಾರಾ, ಎನ್ಎಸ್ ಉಮರ್ ಮಾಸ್ಟರ್, ಹನೀಫ್ ಹಾಜಿ ಉಳ್ಳಾಲ, ಕೆ.ಇ.ಅಬ್ದುಲ್ ಖಾದರ್ ರಝ್ವಿ ಸಾಲೆತ್ತೂರು, ಜಿಲ್ಲಾ ಕೋಶಾಧಿಕಾರಿ ಎಸ್.ಎಂ ಬಶೀರ್ ಹಾಜಿ, ಅಬ್ದುಲ್ ರಹ್ಮಾನ್ ಮದನಿ ಜೆಪ್ಪು, ಮುಹಮ್ಮದ್ ಮದನಿ ಸಾಮಣಿಗೆ, ಮುತ್ತಲಿಬ್ ಹಾಜಿ ನಾರ್ಶ, ಬಾವ ಫಕ್ರುದ್ದೀನ್ ಕೃಷ್ಣಾಪುರ, ಬದ್ರುದ್ದೀನ್ ಅಝ್ಹರಿ, ಹನಿಫ್ ಹಾಜಿ ಬಜ್ಪೆ, ಇಸ್ಮಾಯಿಲ್ ಕೆಎಸ್ಸಾರ್ಟಿಸಿ, ಕಿನ್ಯ, ಇಸಾಕ್ ಝುಹ್ರಿ ಸೂರಿಂಜೆ, ಬಿ.ಎಚ್ ಇಸ್ಮಾಯಿಲ್ ಕೆಸಿ ರೋಡ್, ಕೆ.ಎಂ ಫಾರೂಕ್ ಕೆಸಿ ರೋಡ್ ಉಪಸ್ಥಿತರಿದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಮುಸ್ಲಿಯಾರ್ ಸ್ವಾಗತಿಸಿದರು. ಜಿಲ್ಲಾ ಸದಸ್ಯ ಕೆಎ ಬಶೀರ್ ಮದನಿ ಕೂಳೂರು ವಂದಿಸಿದರು.