ದೇರಳಕಟ್ಟೆ : ನೋಟರಿ ಇಸಾಕ್ರ ನೂತನ ಕಚೇರಿ ಉದ್ಘಾಟನೆ
ಮಂಗಳೂರು, ಅ. 27: ನ್ಯಾಯವಾದಿ ಮತ್ತು ನೋಟರಿ ಶೇಕ್ ಇಸ್ಹಾಕ್ರ ನೂತನ ಕಚೇರಿ ದೇರಳಕಟ್ಟೆ ಜಂಕ್ಷನ್ನಲ್ಲಿರುವ ನವಾಝ್ ಕಾಂಪ್ಲೆಕ್ಸ್ನ ಒಂದನೇ ಮಹಡಿಯಲ್ಲಿ ಮಂಗಳವಾರ ಶುಭಾರಂಭಗೊಂಡಿತು. ನೂತನ ಕಚೇರಿಯನ್ನು ಸೈಯದ್ ಅಸ್ಸಖಾಫ್ ಆಶ್ರಫ್ ತಂಙಳ್ ಆದೂರು ಉದ್ಘಾಟಿಸಿ ದುಆಗೈದರು.
ಈ ಸಂದರ್ಭ ಹಿರಿಯ ವಕೀಲ, ನೋಟರಿ ಅಬ್ದುಲ್ ಅಝೀಝ್ರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಇಸ್ಹಾಕ್ ಝುಹರಿ ಬೆಲ್ಮ, ಸೆಲ್ಫ್ ಲೆಸ್ಸ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅಬ್ದುಲ್ ಅಝೀಝ್ ನೂರಾನಿ, ಕೆ.ಇ. ರಝ್ವಿ, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಮುಹಮ್ಮದ್ ಕುಕ್ಕುವಳ್ಳಿ, ಬೆಳ್ಮ ಗ್ರಾಪಂ ಉಪಾಧ್ಯಕ್ಷ ಸತ್ತಾರ್ ಸಿ.ಎಂ., ಸದಸ್ಯ ಕಬೀರ್ ಗುಡ್ಲಕ್, ಎಂ. ಫ್ರೆಂಡ್ಸ್ ಅಧ್ಯಕ್ಷ ಹನೀಫ್ ಹಾಜಿ ಗೋಳ್ತಮಜಲು, ಇಬ್ರಾಹೀಂ ಖಲೀಲ್, ಹನೀಫ್ ವಿಶನ್, ಸಮೀರುದ್ದೀನ್ ಪಡುಬೆಟ್ಟು, ರಫೀಕ್, ನ್ಯಾಯವಾದಿಗಳಾದ ರಾಮಚಂದ್ರ, ಅನ್ವರ್ ಸಾದತ್, ರಾಜೇಶ್ ಕೆ.ಜಿ., ಸರ್ಫ್ರಾಝ್, ಮುಖ್ತಾರ್ ಅಹ್ಮದ್, ಝಹೀದ್ ಹುಸೈನ್ ಉಚ್ಚಿಲ್, ಫೈಝಲ್, ಸಿರಾಜುದ್ದೀನ್, ಅಝೀಝ್, ಪ್ರಸಾದ್, ರಾಜಿ ಸಿ. ನಾಯರ್ ಮತ್ತು ಅಥಾವುಲ್ಲಾ ಕೋಡಿಂಬಾಳ, ಅಝೀಝ್, ಸಲೀಂ, ರಶೀದ್, ಸುಹೈಲ್ ಪುತ್ತೂರು, ಹೈದರ್ ಜಿ.ಜಿ., ರಝಾಕ್, ಶಾಕಿರ್ ಬೆಲ್ಮ, ಮುಹಮ್ಮದ್ ಕೃಷ್ಣಾಪುರ, ಅಬ್ದುರ್ರಹ್ಮಾನ್ ಕೃಷ್ಣಾಪುರ, ಅಯ್ಯೂಬ್ ಕಾವಳಕಟ್ಟೆ, ನೌಫಲ್, ಜಲೀಲ್, ಶಮೀರ್ ಕಲ್ಲಾಪು ಉಪಸ್ಥಿತರಿದ್ದರು.