ಅಜೆಕಾರು ನೂರಾನಿ ಮಸೀದಿಯಲ್ಲಿ ಸರಕಾರಿ ಉದ್ಯೋಗ ಮಾಹಿತಿ, ಚಿಂತನಾ ಶಿಬಿರ
ಕಾರ್ಕಳ : ಸರಕಾರಿ ಉದ್ಯೋಗ ಮಾಹಿತಿ ಹಾಗೂ ಚಿಂತನಾ ಸಭೆಯು 'ಹೆಬ್ರಿ, ಕಾರ್ಕಳ ನಮ್ಮ ನಾಡ ಒಕ್ಕೂಟ ಮತ್ತು ನೂರಾನಿ ಮಸೀದಿ ಕಮಿಟಿ' ಸಹಯೋಗದಲ್ಲಿ ಅಜೆಕಾರು-ಕೈಕಂಬದ ನೂರಾನಿ ಮಸೀದಿ ಆವರಣದಲ್ಲಿ ಸೋಮವಾರ ನಡೆಯಿತು.
ಶಿಬಿರವು ಮೌಲಾನಾ ಅಬ್ದುಲ್ ಹಫೀಝ್ ಅಲ್ ಕಾಸಿಮಿ ಕಾರ್ಕಳ ಅವರ ಕಿರಾಅತ್ ಮೂಲಕ ಆರಂಭಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ನೂರಾನಿ ಮಸೀದಿಯ ಅಧ್ಯಕ್ಷರಾದ ಮುಹಮ್ಮದ್ ಆಸಿಫ್ ವಹಿಸಿದ್ದರು. ಹೆಬ್ರಿ ಎನ್ ಎನ್ ಒ ಉಪಾಧ್ಯಕ್ಷರಾದ ಮುಸ್ತಾಕ್ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಮೌಲಾನಾ ಅಬ್ದುಲ್ ಹಫೀಝ್, ಅಲ್ ಕಾಸಿಮಿ ಮತ್ತು ಮೌಲಾನಾ ರಫೀಕ್, ಹುಸೈನ್ ಹೈಕಾಡಿ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ವಕೀಲರಾದ ಹಮ್ಜತ್ ಹೆಜಮಾಡಿ, ತರಬೇತುದಾರರಾದ ನೌಜಲ್ ಮುಲ್ಕಿ, ಅಬ್ದುಲ್ ರಝಾಕ್ ಕಾಪು ಅವರು ಸರಕಾರಿ ಉದ್ಯೋಗದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ನಮ್ಮ ನಾಡ ಒಕ್ಕೂಟ ಮೂಡುಬಿದರೆ ವಲಯ ಮುಖ್ಯಸ್ಥರಾದ ಅಬ್ದುಲ್ ಹಮೀದ್, ಕುಂದಾಪುರ ವಲಯ ಮುಖ್ಯಸ್ಥರಾದ ಹುಸೈನ್ ಹೈಕಾಡಿ, ಹೆಬ್ರಿ ವಲಯ ಉಪಾಧ್ಯಕ್ಷರಾದ ಮುಸ್ತಾಕ್ ಅಹ್ಮದ್, ಬ್ರಹ್ಮಾವರ ವಲಯ ಸದಸ್ಯರಾದ ಶಾಕಿರ್, ಕಾರ್ಕಳ - ಹೆಬ್ರಿ ಇದರ ಸಕ್ರಿಯ ಸದಸ್ಯರಾದ ನಝೀರ್ ಶಾ ಅಜೆಕಾರು, ಜುಮಾ ಮಸೀದಿ ಖತೀಬ್ ಮೌಲಾನಾ ರಫೀಕ್, ವಕೀಲರಾದ ಹಮ್ಜತ್ ಹೆಜಮಾಡಿ, ತರಬೇತು ದಾರರಾದ ನೌಜಲ್ ಮುಲ್ಕಿ, ಅಬ್ದುಲ್ ರಝಾಕ್ ಕಾಪು, ಇರ್ಷಾದ್ ಪವರ್ ಟಿವಿ ರಿಪೋರ್ಟರ್ ಉಪಸ್ಥಿತರಿದ್ದರು.
ಈ ಸಭೆಯನ್ನು ಝೋಮ್ ಮೂಲಕ ಅಂತರ್ಜಾಲ ತಾಣದಲ್ಲಿ ನೇರ ಪ್ರಸಾರ ಮಾಡಲಾಗಿತ್ತು. ಹೆಬ್ರಿ ಎನ್ ಎನ್ ಒ ಕಾರ್ಯದರ್ಶಿ ಅಬ್ದುಲ್ ಶುಕೂರ್ ಕಾರ್ಯಕ್ರಮ ನಿರೂಪಿಸಿದರು. ಮುಹಮ್ಮದ್ ಆಸಿಫ್ ವಂದಿಸಿದರು.