ಕೊಲ್ಲರಕೋಡಿ: ಮಸೀದಿ, ಮದ್ರಸಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ
ಮಂಜನಾಡಿ, ಅ.31: ಕೊಲ್ಲರಕೋಡಿಯ ನೂರುಲ್ ಹುದಾ ಮಸ್ಜಿದ್ ತಖ್ವಾ ಮತ್ತು ನೂರುಲ್ ಉಲೂಮ್ ಮದ್ರಸ ಇದರ ನೂತನ ಪದಾಧಿಕಾರಿಗಳ ಆಯ್ಕೆಯು ಇಬ್ರಾಹೀಂ ಹಾಜಿ ಪಾರೆ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು.
ನೂತನ ಅಧ್ಯಕ್ಷರಾಗಿ ಅಬ್ದುಲ್ ಮಜೀದ್ ಪಾರೆ, ಪ್ರಧಾನ ಕಾರ್ಯದರ್ಶಿಯಾಗಿ ಬಶೀರ್ ಎನ್. ಎಂ, ಉಪಾಧ್ಯಕ್ಷರಾಗಿ ಹಮೀದ್ ತಟ್ಲ, ಇಬ್ರಾಹೀಂ ಅಹ್ಸನಿ, ಜೊತೆ ಕಾರ್ಯದರ್ಶಿಯಾಗಿ ಆಸಿಫ್ ಕೆ.ಎಚ್, ಹೈದರ್ ಪಲ್ಲ, ಕೋಶಾಧಿಕಾರಿಯಾಗಿ ಮೂಸ ಹಾಜಿ ಹಾಗೂ ಕಾರ್ಯಕಾರಿ ಸಮಿತಿಗೆ 19 ಮಂದಿಯನ್ನು ಆಯ್ಕೆ ಮಾಡಲಾಯಿತು.
ಸಾಬಿತ್ ಪಾರೆ ವರದಿ ಮಂಡಿಸಿದರು.
Next Story