ನ. 1 : ಮುಸ್ಲಿಂ ಜಮಾಅತ್ ತಾಲೂಕು ಸಮಿತಿ ಘೋಷಣಾ ಸಮಾವೇಶ
ಮಂಗಳೂರು : ಕರ್ನಾಟಕ ಮುಸ್ಲಿಂ ಜಮಾಅತ್ ಸಂಘಟನೆ ದ.ಕ. ಜಿಲ್ಲಾ ಘಟಕವು ತಾಲೂಕು ಸಮಿತಿ , ಬ್ಲಾಕ್ ಸಮಿತಿ, ಗ್ರಾಮ ಸಮಿತಿ ಅಸ್ತಿತ್ವಕ್ಕೆ ತರಲಾಗಿದ್ದು, ಅದರಂತೆ ಮಂಗಳೂರು ಹಾಗೂ ಮೂಡಬಿದಿರೆ ತಾಲೂಕು ಸಮಿತಿ ಘೋಷಣಾ ಸಮಾವೇಶವು
ನ. 1ರ ಬೆಳಗ್ಗೆ 9.30ಕ್ಕೆ ಮಿಸ್ಬಾಹ್ ಕಾಲೇಜು ಕಾಟಿಪಳ್ಳ ಹಾಗೂ ಸಂಜೆ 4ಕ್ಕೆ ಸಮಾಜ ಮಂದಿರ ಮೂಡುಬಿದಿರೆಯಲ್ಲೂ ನಡೆಯಲಿದೆ.
ಕಾರ್ಯಕ್ರಮದಲ್ಲಿ ರಾಜ್ಯ ಉಪಾಧ್ಯಕ್ಷ ಎಚ್ ಐ ಅಬೂಸುಫ್ಯಾನ್ ಮದನಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ಕೆ ಎಮ್ ಶಾಫಿ ಸಅದಿ ಬೆಂಗಳೂರು, ಜಿಲ್ಲಾ ಕಾರ್ಯಾಧ್ಯಕ್ಷ ಎಸ್ ಎಮ್ ರಷೀದ್ ಹಾಜಿ, ಪ್ರಧಾನ ಕಾರ್ಯದರ್ಶಿ ಬಿ ಎಂ ಮುಮ್ತಾಝ್ ಅಲಿ, ರಾಜ್ಯ ಕಾರ್ಯದರ್ಶಿ ಅಬ್ದುಲ್ ಹಮೀದ್ ಬಜ್ಪೆ , ಎಸ್ಇಡಿಸಿ ರಾಜ್ಯಾಧ್ಯಕ್ಷ. ಕೆಕೆಎಂ ಕಾಮಿಲ್ , ಸಾದಿಖ್ ಮಾಸ್ಟರ್ ಮಲೆಬೆಟ್ಟು ಹಾಗೂ ವಿವಿಧ ಮೊಹಲ್ಲಗಳ ಗಣ್ಯ ನಾಯಕರುಗಳು ಭಾಗವಹಿಸುವರು ಎಂದು ಜಿಲ್ಲಾ ಕೋ ಆರ್ಡಿನೇಟರ್ ಅಶ್ರಫ್ ಕಿನಾರ ತಿಳಿಸಿದ್ದಾರೆ.
Next Story