ಯುನೈಟೆಡ್ ಟೊಯೊಟಾದಲ್ಲಿ ಹೊಸ ‘ಅರ್ಬನ್ ಕ್ರೂಸರ್’ ಕಾರು ಬಿಡುಗಡೆ
ಮಂಗಳೂರು, ಅ.31: ಹೆಸರಾಂತ ಕಾರು ಮಳಿಗೆ ಯುನೈಟೆಡ್ ಟೊಯೊಟಾದಲ್ಲಿ ಗುರುವಾರ ಹೊಸ ‘ಅರ್ಬನ್ ಕ್ರೂಸರ್’ ಕಾರು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು.
ವಾಹನ ಬಿಡುಗಡೆಗೊಳ್ಳುವ ಮೊದಲೇ 48 ಗ್ರಾಹಕರಿಂದ ಕಾರುಗಳನ್ನು ಬುಕ್ಕಿಂಗ್ ಮಾಡಲಾಯಿತು. 500ಕ್ಕೂ ಹೆಚ್ಚು ಜನರು ವಾಹನದ ಬಗ್ಗೆ ವಿಚಾರಣೆ ನಡೆಸಿದ್ದರು. ಮೊದಲ ದಿನದಂದು ಒಂಬತ್ತು ವಾಹನಗಳನ್ನು ಗ್ರಾಹಕರಿಗೆ ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ಯುನೈಟಡ್ ಟೊಯೊಟಾದ ಚೇರ್ಮನ್ ಆರೂರ್ ಪ್ರಭಾಕರ್ ರಾವ್, ಮ್ಯಾನೇಜಿಂಗ್ ಡೈರೆಕ್ಟರ್ ಆರೂರ್ ಗಣೇಶ್ ರಾವ್, ಮ್ಯಾನೇಜಿಂಗ್ ಡೈರೆಕ್ಟರ್ ಫೈನಾನ್ಸ್ ಆರೂರ್ ರಾಘವೇಂದ್ರ ರಾವ್, ಡೈರೆಕ್ಟರ್ ಸೇಲ್ಸ್ ಆ್ಯಂಡ್ ಮಾರ್ಕೆಟಿಂಗ್ನ ಆರೂರ್ ರಾಮ್ ಗೋಪಾಲ್ ರಾವ್ ಹಾಗೂ ಡೈರೆಕ್ಟರ್ಗಳಾದ ಆರೂರ್ ವರುಣ್ ರಾವ್ ಮತ್ತು ವಿಕ್ರಮ್ ರಾವ್, ವೈಸ್ ಪ್ರೆಸಿಡೆಂಟ್ ರಮೇಶ್ ಪ್ರಭು ಉಪಸ್ಥಿತರಿದ್ದರು.
ಮಂಗಳೂರಿನ ಗ್ರಾಹಕರಾದ ರಮೇಶ್ ಎಸ್., ಜುಬೈದ್, ಎಸ್ಪಿಟಿ ಟ್ರೇಡರ್ಸ್, ಪುಷ್ಪೇಂದ್ರ ಸಿಂಗ್, ಅಬ್ದುಲ್ ರಹ್ಮಾನ್, ಅಬ್ದುಲ್ ಸಲಾಂ ಮತ್ತು ಉಡುಪಿಯ ಗ್ರಾಹಕರಾದ ಜಿತೇಶ್ ಶೆಟ್ಟಿ, ಗುಡ್ನೇಶ್ ಹಾಗೂ ರೇಷ್ಮಾ ಶೆಟ್ಟಿ ಅವರಿಗೆ ಕಾರ್ಯಕ್ರಮದಲ್ಲಿ ಕಾರುಗಳನ್ನು ಹಸ್ತಾಂತರಿಸಲಾಯಿತು.
ವಿಶೇಷತೆ: 1.5 ಲೀಟರ್ನ ಪೆಟ್ರೋಲ್ ಇಂಜಿನ್ ವಿತ್ ಆಟೊಮೆಟಿಕ್ ಆ್ಯಂಡ್ ಮ್ಯಾನುಯಲ್ ಟ್ರಾನ್ಸ್ಮಿಶನ್ ಸೌಲಭ್ಯವಿದೆ. ಮೂರು ವರ್ಷದ ಅಥವಾ ಒಂದು ಲಕ್ಷ ಕಿ.ಮೀ.ವರೆಗೆ ವಾರಂಟಿ ಇದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.