ಪುಂಜಾಲಕಟ್ಟೆ: ಮರ ಕಡಿದು ಅಕ್ರಮ ಸಾಗಾಟ; ಆರೋಪಿ ಸಹಿತ ಲಾರಿ ವಶ
ಬೆಳ್ತಂಗಡಿ : ಪುಂಜಾಲಕಟ್ಟೆ ಬಳಿ ಅಕ್ರಮವಾಗಿ ಹಲಸು ಮತ್ತು ವಿವಿಧ ಜಾತಿಯ 35ದಿಮ್ಮಿ ಹಾಗೂ 15ಮರದ ಕಂಬಗಳನ್ನು ತುಂಬಿಸಿಕೊಂಡು ಸಾಗಾಟ ಮಾಡುತ್ತಿದ್ದ ಲಾರಿ ಸಹಿತ 5 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಬೆಳ್ತಂಗಡಿ ವಲಯ ಅರಣ್ಯಾಧಿಕರಿ ತ್ಯಾಗರಾಜ್ ಹೆಚ್.ಎಸ್ ನೇತೃತ್ವದ ತಂಡ ಪತ್ತೆಹಚ್ಚಿದೆ.
ಅರಣ್ಯ ಇಲಾಖೆಯವರು ಗಸ್ತು ತಿರುಗುತ್ತಿದ್ದ ವೇಳೆ ಇದನ್ನು ಪತ್ತೆ ಹಚ್ಚಿದ್ದು ಈ ಸಂದರ್ಭ ಚಾಲಕ ಬಂಟ್ವಾಳ ಮೊಗರ್ನಾಡು ಶೇಡಿಗುರಿ ಎಳಬೆಬೈಲು ನಿವಾಸಿ ವಾಮನ ಎಂಬವರನ್ನು ಬಂಧಿಸಿ ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರಿ ಮಾಲಕ ಬಂಟ್ವಾಳ ನಿವಾಸಿ ಕಿರಣ್ ಕುಮಾರ್ ಎಂಬವರ ಮೇಲೆ ಪ್ರಕರಣ ದಾಖಲಿಸಲಾಗಿದೆ.
Next Story